Thursday, May 9, 2024
spot_imgspot_img
spot_imgspot_img

ಕಡಬ: ಹಣ ನೀಡದೇ ವಂಚಿಸಿದ ಬ್ರೋಕರ್; ತನ್ನದಲ್ಲದ ತಪ್ಪಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿದ ವ್ಯಕ್ತಿ ಸಾಮಾಜಿಕ ಜಾಣತಾಲದ ಮೊರೆ

- Advertisement -G L Acharya panikkar
- Advertisement -

ಕಡಬ: ತನ್ನಲ್ಲಿದ್ದ ಕಾರನ್ನು ಬೇರೆ ವ್ಯಕ್ತಿಗೆ ಮಾರಾಟ ಮಾಡಿದ್ದು ಬ್ರೋಕರ್ ನಿಗದಿತ ಸಮಯಕ್ಕೆ ಹಣ ನೀಡದ ಕಾರಣ ಚೆಕ್ ಬೌನ್ಸ್ ಕೇಸ್ ಪ್ರಕರಣದಲ್ಲಿ ಯುವಕನೊಬ್ಬ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಘಟನೆ ಕಡಬದಿಂದ ವರದಿಯಾಗಿದೆ.

ಕಡಬ ಪಿಜಕ್ಕಳದ ಅಬ್ದುಲ್ ರವೂಫ್ ಸಂಕಷ್ಟಕ್ಕೆ ಸಿಲುಕಿದ ಯುವಕ. ತನ್ನಲ್ಲಿದ್ದ ಸ್ವಿಫ್ಟ್ ಕಾರನ್ನು 2020 ರ ಸೆಪ್ಟಂಬರ್ ರಂದು ಮದ್ಯವರ್ತಿ ಬಂಟ್ವಾಳ ತಾಲೂಕಿನ ವಳಚ್ಚಿಲ್ ನ ಅಹ್ಮದ್ ಕಬೀರ್ ಎಂಬವರ ಮೂಲಕ 2 ಲಕ್ಷದ 70 ಸಾವಿರಕ್ಕೆ ಮಾರಾಟ ಮಾಡಿದ್ದರು. ಕಾರು ಪಡೆಯಲು ಬಂದಿದ್ದ ಬ್ರೋಕರ್ ಕಬೀರ್ 90,000 ರೂ ಪಾವತಿ ಮಾಡಿ ಉಳಿದ ಹಣವನ್ನು ಐದು ದಿನದೊಳಗೆ ಪಾವತಿಸುವುದಾಗಿ ತಿಳಿಸಿದ್ದ.

ಲೋನ್ ಹಣವನ್ನು ಪಾವತಿಸುವುದಾಗಿ ಒಪ್ಪಿಕೊಂಡಿದ್ದು ಹೀಗಾಗಿ ಕಡಬದ ವಕೀಲರೊಬ್ಬರ ಕಚೇರಿಯಲ್ಲಿ ಒಪ್ಪಂದ ಪತ್ರಕ್ಕೂ ಸಹಿ ಮಾಡಲಾಗಿತ್ತು. ಒಪ್ಪಂದಪತ್ರದಲ್ಲಿ ನಮೂದಿಸಿರುವಂತೆ ಐದು ದಿನದೊಳಗೆ ಹಣ ಪಾವತಿಸದ ಕಾರಣ ಆತನನ್ನು ಸಂಪರ್ಕಿಸಿದಾಗ ಪೋನ್ ಕರೆಗೆ ಸಿಗಲಿಲ್ಲ ಎನ್ನಲಾಗಿದೆ. ಕೆಲ ಸಮಯದ ಬಳಿಕ ಕಾರು ಪಡೆದುಕೊಂಡಿದ್ದ ದಾವಣೆಗೆರೆಯ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಇನ್ನು ಬ್ರೋಕರ್ ಮನೆ ವಿಳಾಸಕ್ಕೂ ವಕೀಲರ ಮೂಲಕ ನೋಟಿಸು ಕಳುಹಿಸಿದರೂ ಆ ವಿಳಾಸದಲ್ಲಿ ಇಲ್ಲದಿರುವುದು ಕಂಡುಬಂದಿದೆ. ಎರಡು ವರ್ಷಗಳಿಂದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವುದಾಗಿ ರವೂಫ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದಾರೆ.

ಫೈನಾನ್ಸ್ ನವರ ಒತ್ತಡದಿಂದ ಯುವಕ 40,000 ರೂ ಪಾವತಿಸಿದರೂ ಸಕಾಲಕ್ಕೆ ಲೋನ್ ಸಂದಾಯವಾಗದ ಕಾರಣ ಯುವಕನ ವಿರುದ್ದ ಚೆಕ್ ಬೌನ್ಸ್ ಕೇಸು ದಾಖಲಿಸಿದ್ದಾರೆ.

- Advertisement -

Related news

error: Content is protected !!