- Advertisement -
- Advertisement -
ಕಡಬ: ಇಲ್ಲಿನ ಕೊಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿರಿಬಾಗಿಲಿನಲ್ಲಿ ಹಾಡಹಗಲೇ ಕಾಡಾನೆಯೊಂದು ತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ಕಿತ್ತು ತಿಂದಿದೆ.
ಸಿರಿಬಾಗಿಲಿನ ಬಾರ್ಯ ಎಂಬಲ್ಲಿಗೆ ಸೋಮವಾರ ಸಂಜೆ ಗರ್ಭಿಣಿ ಆನೆ ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ತೋಟದತ್ತ ಬಂದಿರುವ ಆನೆಯ ಚಿತ್ರವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಜನಾರ್ಧನ ಬಾರ್ಯ,ಬಾಲಕೃಷ್ಣ ಗೌಡ, ಐತಪ್ಪ ಗೌಡ, ದೇವರಾಜ ಗೌಡ ,ಅಣ್ಣಪ್ಪ ಗೌಡ ಎಂಬವರ ತೋಟಕ್ಕೆ ಕಾಡನೆ ನುಗ್ಗಿದೆ ಎಂದು ತಿಳಿದುಬಂದಿದೆ.
- Advertisement -