Saturday, May 4, 2024
spot_imgspot_img
spot_imgspot_img

ಕತ್ತು ಸೀಳಿ ಪುತ್ರನ ಕೊಂದ ಪಾಪಿ ತಾಯಿ; ವಿಚಾರಣೆಯಿಂದ ಬಯಲಾಯ್ತು ಮತ್ತೊಂದು ಕೊಲೆ ರಹಸ್ಯ!

- Advertisement -G L Acharya panikkar
- Advertisement -

ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದಿರುವ ಆಘಾತಕಾರಿ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ. ಹೀಗೆ ಸಾವನ್ನಪ್ಪಿದ ಮಕ್ಕಳಲ್ಲಿ ಒಬ್ಬನಿಗೆ ಆಕೆ ತಾಯಿಯಾಗಿದ್ದರೆ, ಮತ್ತೊಬ್ಬನಿಗೆ ಮಲತಾಯಿ.

7 ವರ್ಷಗಳ ಹಿಂದೆ ರಜನಿಕಾಂತ್ ಎಂಬ ವ್ಯಕ್ತಿ ಗೌರಿ ಪಟೇಲ್ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದ. ಆದರೆ ಅದಾಗಲೇ ತೀರಿಕೊಂಡಿದ್ದ ಮೊದಲ ಹೆಂಡತಿಗೆ ಇಬ್ಬರು ಮಕ್ಕಳಿದ್ದರು. ಎಲ್ಲರೂ ಅಹಮದಾಬಾದ್​ನ ದಸ್ಕರೊಯ್​ ಗ್ರಾಮದಲ್ಲಿ ನೆಲೆಸಿದ್ದರು.

ಮಂಗಳವಾರ ಬೆಳಿಗ್ಗೆ ಮಲತಾಯಿ ಗೌರಿ ಪಟೇಲ್ ಪತಿಯ ಮೊದಲ ಹೆಂಡ್ತಿಯ ಹಿರಿಯ ಮಗ ಹಾರ್ದಿಕ್​ನ ಮನೆಗೆ ಬಂದಿದ್ದಾಳೆ. ಈ ವೇಳೆ ಹಾರ್ದಿಕ್ ಮನೆಯಲ್ಲಿ ಒಬ್ಬರೇ ಮಲಗಿದ್ದ. ಅಷ್ಟೇ ಅಲ್ಲದೆ ಆತನ ತಮ್ಮ ಉಮಂಗ್ ಕೆಲಸಕ್ಕೆ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡ ಗೌರಿ ತನ್ನ ಮೂವರು ಸಂಬಂಧಿಕರೊಂದಿಗೆ (ಸಂಜಯ್, ಅನಿಲ್ ಮತ್ತು ದಿನೇಶ್) ಸೇರಿ ಹಾರ್ದಿಕ್​ನ ಕತ್ತು ಸೀಳಿ ಕೊಲೆ ಮಾಡಿದ್ದಳು. ಬಳಿಕ ಆತನ ಮೃತ ದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಊರ ಹೊರಗಿನ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾಳೆ.

ತಮ್ಮ ಉಮಂಗ್ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ, ಅಣ್ಣ ಇರಲಿಲ್ಲ. ಹೀಗಾಗಿ ಮಲತಾಯಿ ಗೌರಿಯನ್ನು ವಿಚಾರಿಸಿದ್ದಾನೆ. ಆದರೆ ಆಕೆ ಆತನ ಪ್ರಶ್ನೆಗೆ ಸರಿಯಾದ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಉಮಂಗ್ ತನ್ನ ನೆರೆಹೊರೆಯವರಲ್ಲಿ ಕೇಳಿದ್ದಾನೆ. ಇದೇ ವೇಳೆ ನಿಮ್ಮ ತಾಯಿ ಹಾಗೂ ಮೂವರು ಸಂಬಂಧಿಕರು ಏನನ್ನೋ ಚೀಲದಲ್ಲಿ ಸಾಗಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಈ ಮಾತನ್ನು ಕೇಳಿ ಮತ್ತಷ್ಟು ಸಂಶಯಗೊಂಡ ಉಮಂಗ್ ಪಟೇಲ್ ಸಹೋದರ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಅಲ್ಲದೆ ಮಲತಾಯಿ ಗೌರಿ ಮತ್ತು ಆಕೆಯ ಸಹೋದರು ಹಾರ್ದಿಕ್ ಜೊತೆ ಯಾವಾಗಲೂ ಹಣಕ್ಕಾಗಿ ಜಗಳವಾಡುತ್ತಿದ್ದರು. ಅಲ್ಲದೆ ತಂದೆಗೆ ಸುಳ್ಳು ಹೇಳಿ ಮಲತಾಯಿ ನಮ್ಮಿಬ್ಬರಿಂದ 25 ಲಕ್ಷದವರೆಗೆ ಸಾಲ ಪಡೆದಿದ್ದಾರೆ. ಕೊರೋನಾ, ಲಾಕ್‌ಡೌನ್ ಮತ್ತು ಕರ್ಫ್ಯೂ ಕಾರಣದಿಂದಾಗಿ ನಮ್ಮ ಡೈರಿ ವ್ಯವಹಾರದಲ್ಲಿ ಸಾಕಷ್ಟು ನಷ್ಟವಾಗಿತ್ತು. ಹೀಗಾಗಿ ಸಾಲವಾಗಿ ನೀಡಿದ್ದ ಹಣವನ್ನು ಅಣ್ಣ ಕೇಳುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದ.

ಈ ಸುಳಿವು ಹಿಡಿದು ಹೊರಟ ಪೊಲೀಸರು ಗೌರಿಯ ನಡೆಯ ಬಗ್ಗೆ ಸಂಶಯ ಮೂಡಿತು. ಹೀಗಾಗಿ ಹಲವು ಬಾರಿ ಪೊಲೀಸ್ ಸ್ಟೇಷನ್​ಗೆ ಕರೆಸಿ ತೀವ್ರ ವಿಚಾರಣೆಗೊಳಪಡಿಸಿದರು. ಈ ವೇಳೆ ಹಾರ್ದಿಕ್ ಪಟೇಲ್​ನನ್ನು ಕೊಂದಿರುವುದನ್ನು ಒಪ್ಪಿಕೊಂಡಳು. ಅಷ್ಟೇ ಅಲ್ಲದೆ 15 ವರ್ಷಗಳ ಹಿಂದೆ 2014 ರಲ್ಲಿ ತನ್ನ 11 ವರ್ಷದ ಮಗನನ್ನೂ ನಾನೇ ಕೊಂದಿರುವುದಾಗಿ ಬಾಯಿ ಬಿಟ್ಟಿದ್ದಾಳೆ.

driving
- Advertisement -

Related news

error: Content is protected !!