- Advertisement -
- Advertisement -
ಬೆಂಗಳೂರು: ಕರ್ನಾಟಕ ಹೈಕೋರ್ಟ್ಗೆ ನೂತನ ಸಿಜೆಯಾಗಿ ರಿತುರಾಜ್ ಅವಸ್ತಿ ಇಂದು ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಸಿಜೆ ರಿತು ರಾಜ್ ಆವಸ್ತಿಯವರ ಹಿನ್ನಲೆ ನೋಡೋದಾದ್ರೆ.. 1960ರ ಜುಲೈ 3 ರಂದು ರಿತು ರಾಜ್ ಆವಸ್ತಿಯವರ ಜನನವಾಯ್ತು. 1986ರಲ್ಲಿ ಲಕ್ಲೋ ವಿವಿಯಲ್ಲಿ ಕಾನೂನು ಪದವಿ ಮುಗಿಸಿದ್ದಾರೆ.
ಕೇಂದ್ರ ಸರ್ಕಾರದ ಪರ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಆಗಿದ್ರು. ಇವರ ಸೇವೆ ಪರಿಗಣಿಸಿ 2009ರ ಏ.13 ರಂದು ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2022 ರ ಜುಲೈ 2ನೇ ತಾರೀಕಿನಂದು ನ್ಯಾ.ರಿತು ರಾಜ್ ಅವಸ್ಥಿ ನಿವೃತ್ತಿಯಾಗಲಿದ್ದಾರೆ.
ಒಟ್ಟು 8 ರಾಜ್ಯಗಳಿಗೆ ಚೀಫ್ ಜಸ್ಟೀಸ್ಗಳನ್ನು ನೇಮಕ ಮಾಡಲಾಗಿದ್ದು ವಿವರ ಹೀಗಿದೆ..
- ರಾಜೇಶ್ ಬಿಂದಲ್- ಅಲಹಾಬಾದ್ ಹೈಕೋರ್ಟ್
- ರಂಜಿತ್ ವಿ. ಮೋರೆ- ಮೇಘಾಲಯ ಹೈಕೋರ್ಟ್
- ಸತೀಶ್ ಚಂದ್ರ ಶರ್ಮ್- ತೆಲಂಗಾಣ ಹೈಕೋರ್ಟ್
- ಪ್ರಕಾಶ್ ಶ್ರೀವಾಸ್ತವ್- ಕಲ್ಕತ್ತಾ ಹೈಕೋರ್ಟ್
- ಆರ್. ವಿ. ಮಲಿಮಠ್- ಮಧ್ಯಪ್ರದೇಶ್ ಹೈಕೋರ್ಟ್
- ರಿತುರಾಜ್ ಅವಸ್ತಿ- ಕರ್ನಾಟಕ ಹೈಕೋರ್ಟ್
- ಅರವಿಂದ್ ಕುಮಾರ್- ಗುಜರಾತ್ ಹೈಕೋರ್ಟ್
- ಪ್ರಶಾಂತ್ ಕುಮಾರ್ ಮಿಶ್ರಾ- ಆಂಧ್ರಪ್ರದೇಶ ಹೈಕೋರ್ಟ್
- Advertisement -