- Advertisement -
- Advertisement -
ಕಲ್ಲಡ್ಕದ “ಶ್ರೀರಾಮ ಮಂದಿರ” ವಾಣಿಜ್ಯ ಸಂಕೀರ್ಣದಲ್ಲಿರುವ ಅಕ್ಷರ ಕೋಚಿಂಗ್ ಸೆಂಟರ್ನಲ್ಲಿ 24/04/2022 ರಂದು ಬೇಸಿಗೆ ಶಿಬಿರ ಉದ್ಘಾಟನೆ ಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೋಚಿಂಗ್ ಸೆಂಟರ್ನ ಪೋಷಕರಾದ ಶ್ರೀಮತಿ ರೇವತಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಕ್ಷರ ಕೋಚಿಂಗ್ ಸೆಂಟರ್ ನ ನಿರ್ದೇಶಕ ಅಭಿಲಾಷ್ ಆಳ್ವ ಮಾತನಾಡಿ ಈ ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ಚೆಸ್, ಸ್ಪೋಕನ್ ಇಂಗ್ಲಿಷ್ ಕಾರ್ಯಾಗಾರ 8 ದಿನ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಚಿತ್ರಕಲಾ ಶಿಕ್ಷಕ ಚೇತನ್ ಕುಮಾರ್ ವಿಟ್ಲ, ಶಿಕ್ಷಕಿ ಶ್ರೀಮತಿ ವಿಶಾಲಾಕ್ಷಿ ಹಾಗೂ ಶ್ರೀಮತಿ ಯವರು ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕ ಚೇತನ್ ಕುಮಾರ್ ವಿಟ್ಲ ಸ್ವಾಗತಿಸಿ ವಂದಿಸಿದರು.
- Advertisement -