Sunday, May 5, 2024
spot_imgspot_img
spot_imgspot_img

ಕಾರು ಆಕ್ಸಿಡೆಂಟ್ ಮೂಲಕ ಅನಿರುದ್ಧಗೆ ಗುಡ್ ಬೈ..! ಜೊತೆ ಜೊತೆಯಲಿಯಲ್ಲಿ ಮತ್ತೆ ಟ್ವಿಸ್ಟ್‌

- Advertisement -G L Acharya panikkar
- Advertisement -

ಹಲವು ದಿನಗಳಿಂದ ಕೂತೂಹಲ ಕೆರಳಿಸಿದ್ದ ಜೊತೆ ಜೊತೆಯಲಿ ಸೀರಿಯಲ್‌ನ ಬೆಳವಣಿಗೆ ಈಗ ಮತ್ತಷ್ಟು ಗರಿಗೆದರಿದೆ. ಈ ಸೀರಿಯಲ್‌ನಿಂದ ಅನಿರುಧ್ ಅವರನ್ನು ಕಿಕ್‌ಔಟ್‌ ಮಾಡುವುದು ಈಗಾಗಲೇ ಖಚಿತವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಆರ್ಯವರ್ಧನ್ ಪಾತ್ರಕ್ಕೆ ಮತ್ತೋರ್ವ ಕಲಾವಿದ ಜೀವ ತುಂಬಲಿದ್ದಾರೆ. ಧಾರವಾಹಿ ಶುರುವಾದ ಮೊದಲ ದಿನದಿಂದಲೂ ಟಿಆರ್‌ಪಿಯಲ್ಲಿ ಸದಾ ಮುಂದಿತ್ತು. ಈಗ ಹೊಸ ಟ್ವಿಸ್ಟ್‌ ಅನ್ನು ಹೆಣೆದು ಬದಲಾದ ಕಲಾವಿದನ ಎಂಟ್ರಿಗೆ ಸಜ್ಜಾಗಿದೆ ಸೀರಿಯತ್ ತಂಡ..!

ಅನಿರುದ್ದ ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಅಪಘಾತ ಮಾಡಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಗೆ ಸೇರಿರುವ ಆರ್ಯವರ್ಧನ್ ಬದುಕಿ ಬರಬಹುದು, ಮತ್ತೆ ಅನಿರುದ್ದ ಅವರೇ ಈ ಪಾತ್ರವನ್ನು ಮಾಡಬಹುದು ಎಂದುಕೊಂಡಿದ್ದ ಅಭಿಮಾನಿಗಳಿಗೂ ಮೆಗಾ ಟ್ವಿಸ್ಟ್ ಕೊಟ್ಟಿದ್ದಾರೆ. ಈಗಾಗಲೇ ನಟ ಹರೀಶ್ ರಾಜ್ ಧಾರಾವಾಹಿಗೆ ಎಂಟ್ರಿಕೊಟ್ಟು ಆಗಿದೆ. ಇವರೇ ಆರ್ಯವರ್ಧನ್ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲಿಗೆ ಅನಿರುದ್ದ ಅವರಿಗೆ ಗೇಟ್ ಪಾಸ್ ಎಂದೇ ಭಾವಿಸಲಾಗಿತ್ತು. ಆದರೆ, ಆರ್ಯವರ್ಧನ್ ಅವರ ಸಹೋದರನ ಪಾತ್ರವನ್ನು ಹರೀಶ್ ರಾಜ್ ಮಾಡಿದ್ದರಿಂದ ಅನಿರುದ್ದ ಅವರಿಗೆ ಮತ್ತೆ ಅವಕಾಶ ಸಿಗುತ್ತದೆ ಅನ್ನುವ ನಿರೀಕ್ಷೆ ಅವರ ಅಭಿಮಾನಿಗಳಿಗೆ ಇತ್ತು. ಅದಕ್ಕೂ ತಣ್ಣೀರು ಎರೆಚಿದೆ ಧಾರಾವಾಹಿ ತಂಡ.

ಎರಡು ದಿನದಿಂದ ಪ್ರಸಾರವಾಗುತ್ತಿರುವ ಕಥೆಯಲ್ಲಿ ಅನಿರುದ್ದ ಮತ್ತು ಹರೀಶ್ ರಾಜ್ ನಿರ್ವಹಿಸುತ್ತಿರುವ ಪಾತ್ರಗಳು ಆಸ್ಪತ್ರೆ ಸೇರಿವೆ. ಅನಿರುದ್ದ ಪಾತ್ರಕ್ಕೆ ಆಕ್ಸಿಡೆಂಟ್ ಆಗಿದ್ದರೆ, ಹರೀಶ್ ರಾಜ್ ಮಾಡುತ್ತಿರುವ ಪಾತ್ರ ಆತ್ಮಹತ್ಯೆ ಮಾಡಿಕೊಂಡಿದೆ. ಅಲ್ಲದೇ ಹರೀಶ್ ರಾಜ್ ಮಾಡುತ್ತಿರುವ ಪಾತ್ರವನ್ನು ಜೀವಂತವಾಗಿ ಉಳಿಸಿಲ್ಲ. ಕಡೆ ಆರ್ಯವರ್ಧನ್ ಮುಖಕ್ಕೆ ತೀವ್ರ ಪೆಟ್ಟಾಗಿದ್ದರಿಂದ ಪ್ಲಾಸ್ಟಿಕ್ ಸರ್ಜರಿ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಈಗ ಪ್ಲಾಸ್ಟಿಕ್ ಸರ್ಜರಿ ಬದಲು ಫೇಸ್ ಟ್ರಾನ್ಸ್ ಪ್ಲಾಂಟ್ ಮಾಡುವ ಕಥೆ ಶುರುವಾಗಿದೆ.

ಅಂದರೆ ಹರೀಶ್ ರಾಜ್ ಪಾತ್ರದ ಮುಖವನ್ನು ಅನಿರುದ್ದ ನಿರ್ವಹಿಸುವ ಪಾತ್ರಕ್ಕೆ ವರ್ಗಾಯಿಸಲಾಗುತ್ತಿದೆ. ಅಲ್ಲಿಗೆ ಅನಿರುದ್ದ ಇನ್ಮುಂದೆ ಧಾರಾವಾಹಿಯಲ್ಲಿ ಅಧಿಕೃತವಾಗಿ ಇರುವುದಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆಯೇ ಅನಿರುದ್ಧ್‌ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಆ ಧಾರಾವಾಹಿ ಬಿಟ್ಟಾಕಿ, ನೀವೇ ಹೊಸ ಸೀರಿಯಲ್ ಶುರು ಮಾಡಿ ಎಂದಿದ್ದಾರೆ. ಈ ಪ್ರೀತಿಗೆ ಸ್ವತಃ ಅನಿರುದ್ದ ಕೂಡ ಧನ್ಯವಾದಗಳನ್ನು ತಿಳಿಸಿದ್ದಾರೆ.


- Advertisement -

Related news

error: Content is protected !!