- Advertisement -
- Advertisement -
ಕಾರ್ಕಳ : ಕೊರೊನಾ ಭೀತಿಯಿಂದ ಮಹಿಳೆಯೋರ್ವರು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾದ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆ ನಾರಾಯಣ ಆಚಾರ್ಯರ ಪತ್ನಿ ಲಕ್ಷ್ಮೀ (65) ಎನ್ನಲಾಗಿದೆ.
ತನಗೆ ಕೊರೊನಾ ಬಂದಿದೆ ಎಂದು ಲಕ್ಷ್ಮೀ ಅವರು ಚೀಟಿ ಬರೆದಿದ್ದು, ಡೀಸೆಲ್ ಮೈಮೇಲೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -