Friday, March 29, 2024
spot_imgspot_img
spot_imgspot_img

ಕಾರ್ಕಳ: ತಂದೆಯ ಹತ್ಯೆಗೆ ಯತ್ನಿಸಿದ ಪುತ್ರ; FIR ದಾಖಲು..!

- Advertisement -G L Acharya panikkar
- Advertisement -
vtv vitla

ಕಾರ್ಕಳ: ನಂದಳಿಕೆಯ ಗೋಳಿಕಟ್ಟೆ ಎಂಬಲ್ಲಿ ಪುತ್ರನೊಬ್ಬ ಬಾಟಲಿಯ ಗಾಜಿನಿಂದ ತಂದೆಯ ಹೊಟ್ಟೆಗೆ ತಿವಿದು ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಗಾಯಗೊಂಡವರು ವಿಶ್ವನಾಥ ಎನ್ನಲಾಗಿದೆ. ಪ್ರಕರಣದ ಆರೋಪಿ ಇವರ ಮಗ ಮಂಜುನಾಥ ಎಂದು ಗುರುತಿಸಲಾಗಿದೆ.

vtv vitla
vtv vitla

ಹೆಂಡತಿ, ಮಕ್ಕಳಿಂದ ದೂರ ಉಳಿದ ಆರೋಪಿ ವಿಶ್ವನಾಥ, ಕಳೆದ ಎರಡು ವರ್ಷಗಳಿಂದ ಕೆಲಸಕ್ಕೆ ಹೋಗದೇ ತಂದೆಗೆ ಸೇರಿದ ಗೋಳಿಕಟ್ಟೆಯ 5 ಸೆಂಟ್ಸ್ ಕಾಲನಿಯ ಮನೆಯಲ್ಲಿ ನೆಲೆಸಿದ್ದ.

ತಂದೆ-ತಾಯಿ ದುಡಿದು ಸಂಪಾದನೆಯಲ್ಲಿಯೇ ತನ್ನ ಜೀವನ ಸಾಗಿಸುತ್ತಿದ್ದ ಮಂಜುನಾಥ ಹಾಗೂ ಆತನ ತಂದೆ ವಿಶ್ವನಾಥನ ನಡುವೆ ಅಗ್ಗಿಂದಾಗ್ಗೆ ಜಗಳ ಏರ್ಪಡುತ್ತಿತ್ತು. ಇದರ ಮುಂದುವರಿದ ಭಾಗವಾಗಿ ಡಿಸೆಂಬರ್ 17ರ ಸಂಜೆ ಮತ್ತೇ ಅವರಿಬ್ಬರಲ್ಲಿ ಜಗಳ ಏರ್ಪಟ್ಟಿದೆ. ತಂದೆಗೆ ಕಾಲಿನಿಂದ ಆರೋಪಿ ಮಂಜುನಾಥ ತನ್ನ ಕೈಯಲ್ಲಿ ಇದ್ದ ಬಾಟಲಿಯ ಗಾಜಿನಲ್ಲಿ ತಂದೆಗೆ ಇರಿದು ಹತ್ಯೆಗೆ ಯತ್ನಿಸಿದ್ದಾರೆ.

ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಆರೋಪಿ ಮಂಜುನಾಥನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
vtv vitla
- Advertisement -

Related news

error: Content is protected !!