- Advertisement -
- Advertisement -
ಕಾರ್ಕಳ: ಅಜೆಕಾರು ಕೈಕಂಬ ಎಂಬಲ್ಲಿ ಕಾರುಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ತೀರ್ಥಯಾತ್ರಿಕರು ಗಾಯಗೊಂಡಿದ್ದಾರೆ.
ಶಿವಮೊಗ್ಗದ ಸಿದ್ದೇಶ್ಚರ ನಗರದ ಹೊಳೆಹೊನ್ನೂರಿನ ನವೀನ್ ಕುಮಾರ್ ಎಂಬವರು ತನ್ನ ಕಾರಿನಲ್ಲಿ ತಾಯಿ ಪದ್ಮ, ಪತ್ನಿ ಶೃತಿ ಮತ್ತು ಮಗಳು ಗ್ರೀಷ್ಮಾಳೊಂದಿಗೆ ಧಾರ್ಮಿಕ ಕ್ಷೇತ್ರ ದರ್ಶನಗೈದು, ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದರು.
ಅಜೆಕಾರು ಕೈಕಂಬ ಎಂಬಲ್ಲಿ ದೇವೆಂದ್ರ ನಾಯಕ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಯದ್ವಾತದ್ವಾ ಚಲಾಯಿಸಿಕೊಂಡು ಬಂದ ಕಾರು ನವೀನ್ ಕುಮಾರ್ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಕಾರಿನಲ್ಲಿದ್ದ ತೀರ್ಥಯಾತ್ರೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಕೇಸುದಾಖಲಾಗಿದೆ.
- Advertisement -