Friday, April 19, 2024
spot_imgspot_img
spot_imgspot_img

ಕಾರ್ಕಳ: ಸಾಲದ ವಿಚಾರದಲ್ಲಿ ರಾಡ್ ನಿಂದ ಹಲ್ಲೆ.! ದೂರು ದಾಖಲು

- Advertisement -G L Acharya panikkar
- Advertisement -

ಕಾರ್ಕಳ: ಫೈನಾನ್ಸ್‌ವೊಂದರಿಂದ ಪಡೆದ ಸಾಲದ ವಿಚಾರದಲ್ಲಿ ಗುಂಪೊಂದು ಮನೆಯಂಗಳಕ್ಕೆ ನುಗ್ಗಿ ರಾಡ್ ನಿಂದ ಹಲ್ಲೆ ಗೈದಿರುವ ಘಟನೆ ಕಾರ್ಕಳ ನಗರದ ಬಂಗ್ಲೆಗುಡ್ಡೆ ಎಂಬಲ್ಲಿ ನಡೆದಿದೆ.

ಬಂಗ್ಲೆಗುಡ್ಡೆಯ ಇನಾಯತ್ (32) ಎಂಬವರು ಪ್ರಕರಣದ ದೂರುದಾರರು. ಸಂಬಂಧಿ ಅಲ್ತಾಫ್ ಎಂಬುವವರ ಹೆಂಡತಿ ಆಸ್ಮಾ ಎಂಬುವವರು ತನ್ನ ಹೆಸರಿನಲ್ಲಿ ಬಜಾಜ್ ಫೈನಾನ್ಸ್ ನಿಂದ ಸಾಲ ತೆಗೆದುಕೊಂಡು ದೊಡ್ಡದಾದ ಟಿ ವಿ ತೆಗೆದುಕೊಡುತ್ತೇನೆ, ಕಂತನ್ನು ಕಟ್ಟುತ್ತಾ ಬನ್ನಿ ಎಂದು ತಿಳಿಸಿದ್ದರು. ಅದರಂತೆ ಇನಾಯತ್ ಟಿವಿಯನ್ನು ಖರೀದಿಸಿ ಮನೆಯಲ್ಲಿ ಇಟ್ಟಿರುತ್ತಾರೆ.

2022 ಮೇ 01 ರಂದು ಮಧ್ಯಾಹ್ನ ಅರೋಪಿಗಳಾದ ಅಲ್ತಾಫ್, ಅದ್ನಾನ್, ಅತೀಫ್, ಅಜೀಮ್, ಶಬೀರ್‌ರವರು ಸೇರಿಕೊಂಡು ಮಾರಕಾಯುಧ ಹಿಡಿದುಕೊಂಡು ಕಾರ್ಕಳ ಕಸಬಾದ ಬಂಗ್ಲೆಗುಡ್ಡೆಯಲ್ಲಿರುವ ಇನಾಯತ್ ಮನೆಯಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅಲ್ತಾಫ್, ಶಬೀರ್ ಹಾಗೂ ಅಜೀಮ್‌ರವರು ಅವಾಚ್ಯ ಶಬ್ದಗಳಿಂದ ಬೈದು ಕರೆದಿದ್ದರು. ಇನಾಯತ್‌ರವರ ತಾಯಿ ಬೀಬಿ ಭಾನು(57) ರವರು ವಿಚಾರಿಸಲು ಮನೆಯೊಳಗಿನಿಂದ ಹೊರಗೆ ಬಂದಾಗ ಆರೋಪಿಗಳಾದ ಅಲ್ತಾಫ್, ಅದ್ನಾನ್ ಹಾಗೂ ಅತೀಫ್‌ರವರು ಮುಗಿಬಿದ್ದಿದ್ದರು.

ತಡೆಯಲು ಮುಂದಾದ ಇನಾಯತ್‌ಗೆ ಅಜೀಮ್ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ಹಣೆಗೆ ಮತ್ತು ಮೂಗಿಗೆ ಹೊಡೆದ ಗಾಯಗೊಳಿಸಿದ್ದಾರೆ. ಶಬೀರನು ನೆಲಕ್ಕೆ ದೂಡಿ ಹಾಕಿ ಎರಡೂ ಕಾಲುಗಳಿಗೆ ತುಳಿದಿರುತ್ತಾನೆ. ಗಾಯಾಳುಗಳಾದ ಇನಾಯತ್ ಹಾಗೂ ಬಿಬಿ ಭಾನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.

- Advertisement -

Related news

error: Content is protected !!