Friday, April 26, 2024
spot_imgspot_img
spot_imgspot_img

ಕಾರ್ಯಕ್ರಮ ಒಪ್ಪಿಕೊಂಡು ಕೊನೆಯ ಕ್ಷಣದಲ್ಲಿ ಕೈಕೊಟ್ಟ ಗೀತಾ ಸಾಹಿತ್ಯ ಸಂಭ್ರಮದ ವಿಠಲ್ ನಾಯಕ್..!!

- Advertisement -G L Acharya panikkar
- Advertisement -
vtv vitla

ಕೊನೆಯ ಕ್ಷಣದಲ್ಲಿ ಖ್ಯಾತ ಕಲಾವಿದರೊಬ್ಬರು ಪೂರ್ವ ನಿಗದಿತ ಕಾರ್ಯಕ್ರಮಕ್ಕೆ ಕೈಕೊಟ್ಟು ಪ್ರೇಕ್ಷಕ ಕಲಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ ಘಟನೆ ಮಿತ್ತನಡ್ಕದಲ್ಲಿ ನಡೆದಿದೆ.

ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಕ್ಷೇತ್ರದ ರಥೋತ್ಸವದ ಹಿನ್ನಲೆ ಜನವರಿ 31 ರಂದು ಮಿತ್ತನಡ್ಕ ಶ್ರೀ ಮಲರಾಯ ದೈವಸ್ಥಾನದ ಬಳಿ ಹಿಂದೂ ಸೇವಾ ಸಮಿತಿ ಮಿತ್ತನಡ್ಕ ಪ್ರಾಯೋಜಕತ್ವದಲ್ಲಿ ವಿಠಲ್ ನಾಯಕ್ ಮತ್ತು ಬಳಗದವರಿಂದ “ಗೀತಾ ಸಾಹಿತ್ಯ ಸಂಭ್ರಮ” ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕರಾವಳಿಯಾದ್ಯಂತ ಹಾಸ್ಯ ಜೊತೆಗೆ ಉತ್ತಮ ಸಂದೇಶವನ್ನು ಸಾರುತ್ತಿದ್ದ ವಿಠಲ್ ನಾಯಕ್ ಬಳಗದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಪ್ರೇಕ್ಷಕರ ಮನಗೆದ್ದಿತ್ತು. ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಇದೆ ಎಂದರೆ ಸಾಕು ಕಲಾಭಿಮಾನಿಗಳು ಕಾರ್ಯಕ್ರಮಕ್ಕಾಗಿ ಮುಗಿಬೀಳುತ್ತಾರೆ. ಇದೇ ರೀತಿ ಮಿತ್ತನಡ್ಕದಲ್ಲಿ ಸಾವಿರಾರು ಜನರು ಕಾರ್ಯಕ್ರಮಕ್ಕೆ ಸಾಕಷ್ಟು ಮಂದಿ ನಿರೀಕ್ಷೆಯಿಟ್ಟು ಆಗಮಿಸಿದ್ದರು. ಆದರೆ ಜನರು ಕಾದಿದ್ದೇ ಬಂತು ಕೊನೆಯವರೆಗೂ ಕಾರ್ಯಕ್ರಮ ನಡೆಯಲೇ ಇಲ್ಲ.. ವಿಠಲ ನಾಯಕರೂ ಇಲ್ಲ.. ಅವರ ಬಳಗವೂ ಇಲ್ಲ..

ಕಾರ್ಯಕ್ರಮದ ಪೋಸ್ಟರ್ ಅಲ್ಲಲ್ಲಿ ಹಾಕಲಾಗಿದ್ದು, ಕಾರ್ಯಕ್ರಮಕ್ಕೆ ಶುಭಕೋರುವ ಹಿನ್ನಲೆ ಸಾಕಷ್ಟು ಜನರು ತಮ್ಮ ಜಾಹೀರಾತನ್ನು ನೀಡಿದ್ದರು. ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸಿ ವಿಠಲ್ ನಾಯಕ್‌ರವರಿಗೆ ಕಾಯುತ್ತಾ ಇದ್ದರು.

ರಾತ್ರಿ 7ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮಕ್ಕೆ ಕಲಾವಿದರೇ ಬರದೇ ಇದ್ದಾಗ ಕಾರ್ಯಕ್ರಮದ ಆಯೋಜಕರು ವಿಠಲ್ ನಾಯಕ್‌ರವರಿಗೆ ಫೋನ್ ಕಾಲ್ ಮೂಲಕ ಸಾಕಷ್ಟು ಬಾರಿ ಪ್ರಯತ್ನಿಸಿದರೂ ಯಾವುದಕ್ಕೂ ವಿಠಲ್ ನಾಯಕ್ ಸ್ಪಂದಿಸಿರಲಿಲ್ಲ. ಈ ಸಂದರ್ಭದಲ್ಲಿ ವಿಠಲ್ ನಾಯಕ್ ಬಳಗದ ರವಿರಾಜ್ ಒಡಿಯೂರುರವರು ಸ್ಥಳದಲ್ಲಿ ಇದ್ದು ತಮ್ಮ ಬಳಗದವರಿಗೆ ಕರೆಮಾಡಿ ಪ್ರಯತ್ನಿಸಿದರೂ ಅವರ ಕರೆಗೂ ಯಾವುದೇ ಸ್ಪಂದನೆ ನೀಡಲಿಲ್ಲ. ಇದರಿಂದ ಕಾರ್ಯಕ್ರಮದ ಆಯೋಜಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ವ ನಿಗದಿಯಾದ ಕಾರ್ಯಕ್ರಮಕ್ಕೆ ಕೊನೆ ಕ್ಷಣದಲ್ಲಿ ಕೈಕೊಟ್ಟ ವಿಠಲ್ ನಾಯಕ್ ಈ ರೀತಿ ಮಾಡಿರುವುದು ಕಲಾಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ವಿಠಲ್ ನಾಯಕ್ ಸಾರಥ್ಯದ ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಆಯೋಜಿಸಿದ ಎಲ್ಲಾ ಆಯೋಜಕರಲ್ಲೂ ಆತಂಕ ಉಂಟಾಗಿದ್ದು, ಕೊನೆ ಕ್ಷಣದಲ್ಲಿ ಕೈಕೊಟ್ಟು ಕಾರ್ಯಕ್ರಮ ರದ್ದು ಮಾಡಿದ ಕರಾವಳಿಯ ಖ್ಯಾತ ಕಲಾವಿದ ವಿಠಲ್ ನಾಯಕ್‌ರವರ ಈ ನಡೆತೆ ಎಲ್ಲರಲ್ಲಿಯೂ ಅಸಮಾಧಾನ ಮೂಡಿಸಿದೆ.

- Advertisement -

Related news

error: Content is protected !!