Sunday, May 12, 2024
spot_imgspot_img
spot_imgspot_img

ಕಾಸರಗೋಡು: ಎರಡು ವರ್ಷಗಳ ಹಿಂದೆ ಕಳವಾಗಿದ್ದ ಪಂಚಲೋಹದ ಉತ್ಸವ ಮೂರ್ತಿ ಪೊದೆಯಲ್ಲಿ ಪತ್ತೆ..!!

- Advertisement -G L Acharya panikkar
- Advertisement -
vtv vitla

ಕಾಸರಗೋಡು: ಮಂಜೇಶ್ವರ ಸಮೀಪದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಎರಡು ವರ್ಷಗಳ ಹಿಂದೆ ಕಳವಿಗೀಡಾಗಿದ್ದ ಪಂಚಲೋಹ ನಿರ್ಮಿತ ಉತ್ಸವ ಮೂರ್ತಿ ದೇವಸ್ಥಾನ ಪರಿಸರದ ಪೊದೆಯಲ್ಲಿ ಪತ್ತೆಯಾಗಿದೆ.

ಫೆ. 9ರಂದು ಸಂಜೆ ಇಲ್ಲಿ ಮಕ್ಕಳು ಫುಟ್ಬಾಲ್ ಅಟವಾಡುತ್ತಿದ್ದಾಗ ಪೊದೆಗಳತ್ತ ಚೆಂಡನ್ನು ಹೆಕ್ಕಲೆಂದು ಹೋದಾಗ ಮೂರ್ತಿ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ದೇವಸ್ಥಾನ ಸಮಿತಿಯವರು ಮೂರ್ತಿಯನ್ನು ದೇವಸ್ಥಾನಕ್ಕೆ ಕೊಂಡೊಯ್ದಿದ್ದಾರೆ. 2020 ಆ.10ರಂದು ಗರ್ಭಗುಡಿಯೊಳಗಿದ್ದ 12 ಗ್ರಾಂ ತೂಕದ ಉತ್ಸವ ಮೂರ್ತಿ, ಶಿವಲಿಂಗದಲ್ಲಿದ್ದ ಎರಡು ಜತೆ ಬೆಳ್ಳಿಯ ಮುಕ್ಕಣ್ಣು, ಬೆಳ್ಳಿಯ ಹರಿವಾಣ, ಧಾರೆಯ ಬಟ್ಟಲು, ರುದ್ರಾಕ್ಷಿ ಮಾಲೆ ಮೊದಲಾದವು ಕಳವುವಾಗಿತ್ತು. ಈ ಬಗ್ಗೆ ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದರು.

- Advertisement -

Related news

error: Content is protected !!