Monday, May 6, 2024
spot_imgspot_img
spot_imgspot_img

ಕಾಸರಗೋಡು: ಗಲ್ಫ್ ಉದ್ಯೋಗಿಯನ್ನು ಅಪಹರಿಸಿ ಕೊಲೆಗೈದು ಆಸ್ಪತ್ರೆಗೆ ರವಾನಿಸಿ ಪರಾರಿಯಾದ ದುಷ್ಕರ್ಮಿಗಳು

- Advertisement -G L Acharya panikkar
- Advertisement -

ಕಾಸರಗೋಡು: ಗಲ್ಫ್ ಉದ್ಯೋಗಿಯಾದ ಯುವಕನೋರ್ವನನ್ನು ಅಪಹರಿಸಿ ಕೊಲೆಗೈದು ಆಸ್ಪತ್ರೆಗೆ ತಲುಪಿಸಿ ತಂಡವು ಪರಾರಿಯಾದ ಘಟನೆ ನಿನ್ನೆ ಸಂಜೆ ಬಂದ್ಯೋಡ್ ನಲ್ಲಿ ನಡೆದಿದೆ.

ಸೀತಾಂಗೋಳಿ ಮುಗುವಿನ ಅಬೂಬಕ್ಕರ್ ಸಿದ್ದಿಕ್(32) ಕೊಲೆಗೀಡಾದ ಯುವಕ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಈ ಕೃತ್ಯ ನಡೆದಿದೆ ಎಂದು ಪೋಲೀಸರಿಗೆ ಪ್ರಾಥಮಿಕ ಮಾಹಿತಿ ಲಭಿಸಿದೆ. ಆದರೆ ಬೇರೆ ಯಾವುದೇ ಕಾರಣ ಇದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಶನಿವಾರವಷ್ಟೇ ಯುವಕ ಗಲ್ಫ್ ನಿಂದ ಊರಿಗೆ ಬಂದಿದ್ದನು. ಇಂದು ಮಧ್ಯಾಹ್ನ ಪೈವಳಿಕೆ ನಿವಾಸಿ ಸೇರಿದಂತೆ ಇಬ್ಬರು ಕಾರಿನಲ್ಲಿ ಸಿದ್ದಿಕ್ ನನ್ನು ಅಪಹರಿಸಿದ್ದು, ಬಳಿಕ ರಾತ್ರಿ ೯ ಗಂಟೆ ಸುಮಾರಿಗೆ ಬಂದ್ಯೋಡಿನ ಆಸ್ಪತ್ರೆಗೆ ವಾಹನವೊಂದರಲ್ಲಿ ತಲಪಿಸಿದ ತಂಡವು ಕೆಲ ನಿಮಿಷದಲ್ಲೇ ಪರಾರಿಯಾಗಿದೆ.

ವೈದ್ಯರು ತಪಾಸಣೆ ನಡೆಸಿದಾಗ ಯುವಕ ಮೃತಪಟ್ಟಿರುವುದು ದ್ರಢಪಟ್ಟಿದೆ . ಬಳಿಕ ಆಸ್ಪತ್ರೆ ಅಧಿಕಾರಿಗಳು ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದು , ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಲ್ಲೆಯಿಂದ ಯುವಕನ ದೇಹದಲ್ಲಿ ಗಾಯಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ . ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದ್ದು , ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

- Advertisement -

Related news

error: Content is protected !!