Sunday, May 5, 2024
spot_imgspot_img
spot_imgspot_img

ಕಾಸರಗೋಡು: ನದಿಯಲ್ಲಿ ಆಟವಾಡಲು ತೆರಳಿದ ಬಾಲಕರು ವೇಳೆ ನೀರು ಪಾಲು: ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

- Advertisement -G L Acharya panikkar
- Advertisement -

ಸುಳ್ಯ: ಬಾಲಕರಿಬ್ಬರು ಆಟವಾಡಿತ್ತಿರುವ ವೇಳೆ ನೀರು ಪಾಲಾದ ಘಟನೆ ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ಸಮೀಪ ಅಡೂರಿನ ದೇವರಡ್ಕ ನದಿಯಲ್ಲಿ ದುರ್ಘಟನೆ ನಡೆದಿದೆ.

ಇಬ್ಬರು ಪುಟಾಣಿಗಳ ತಂದೆಯಂದಿರು ವಿದೇಶದಲ್ಲಿ ಉದ್ಯೋಗದಲ್ಲಿದ್ದು,
ಅಡೂರ್ ದೇವರಡ್ಕದ ಶಾಫಿ -ರುಬೀನ ದಂಪತಿಗಳ ಪುತ್ರ ಮಹಮ್ಮದ್ ಆಶಿಖ್ (7), ಯೂಸುಫ್ ಹಸೈನಾರ್ -ಸೌದ ದಂಪತಿಗಳ ಪುತ್ರ ಮಹಮ್ಮದ್ ಫಾಸಿಲ್ (9) ಮೃತಪಟ್ಟ ಬಾಲಕರು.

ಇಬ್ಬರು ಬಾಲಕರು ಮನೆಯ ಅಸುಪಾಸಿನಲ್ಲಿ ಆಟವಾಡಿಕೊಂಡಿದ್ದು, ಊಟದ ವೇಳೆ ಇವರಿಬ್ಬರು ಕಾಣದಿದ್ದಾಗ ಪಕ್ಕದ ಹೊಳೆಯ ಕಡೆ ತೆರಳಿರುವ ಬಗ್ಗೆ ಅನುಮಾನಿಸಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಇಬ್ಬರು ಅಸ್ವಸ್ಥ ಸ್ಥಿತಿಯಲ್ಲಿದ್ದು, ತಕ್ಷಣ ಬಾಲಕರಿಬ್ಬರನ್ನು ಮುಳ್ಳೇರಿಯ ಆಸ್ಪತ್ರೆಗೆ ದಾಖಸಿದರು ಚಿಕಿತ್ಸೆ ಫಲಕರಿಯಾಗದೆ ಸಾವನ್ನಪ್ಪಿದ್ದರು ಎಂದು ಮೂಲಗಳು ತಿಳಿಸಿವೆ.

- Advertisement -

Related news

error: Content is protected !!