Friday, April 26, 2024
spot_imgspot_img
spot_imgspot_img

ಕುಂದಾಪುರ: ಅನ್ಯಕೋಮಿನ ಯುವಕರು ಹಿಂದೂ ಯುವತಿಯರ ಮೇಲೆ ಕಣ್ಣು ಹಾಕಿದ್ರೆ ಕಣ್ಣು ಕಿತ್ತು ಬಿಸಾಡಬೇಕು: ಸುನೀಲ್ ಮತ್ತು ಸಲ್ಮಾನ್ ನಡುವಿನ ವ್ಯತ್ಯಾಸ ಗೊತ್ತಿರಬೇಕು; ಶರಣ್ ಪಂಪ್ ವೆಲ್

- Advertisement -G L Acharya panikkar
- Advertisement -

ಕುಂದಾಪರ: ಮುಸಲ್ಮಾನ ಯುವಕರು ಹಿಂದೂ ಹೆಣ್ಮಕ್ಕಳಿಗೆ ಕಣ್ಣು ಹಾಕಿದ್ರೆ ಎರಡೂ ಕಣ್ಣುಗಳನ್ನು ಕಿತ್ತು ಬಿಸಾಡಬೇಕು. ನಿಮಗೆ ಮಹೇಶ ಅಂದ್ರೆ ಯಾರೂ ಮೊಹಮ್ಮದ್ ಅಂದ್ರೆ ಯಾರು ಗೊತ್ತಾಗಬೇಕು ಎಂದು ವಿ.ಹಿಂ.ಪ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದರು.

ಶಿಲ್ಪ ದೇವಾಡಿಗ ಲವ್ ಜಿಹಾದ್ ಆತ್ಮಹತ್ಯೆ ಪ್ರಕರಣ ಖಂಡಿಸಿ ಉಡುಪಿ ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಸಭೆಯಲ್ಲಿ ಮಾತನಾಡಿ, ಶಿಲ್ಪಾ ದೇವಾಡಿಗ ರೀತಿ ಇನ್ನೊಂದು ಹೆಣ್ಣು ಮಗಳಿಗೆ ಅನ್ಯಾಯ ಆಗಬಾರದು. ಅದಕ್ಕೋಸ್ಕರ ಮುಸಲ್ಮಾನ ಯುವಕರು ನಮ್ಮ ಮನೆಯ ಹೆಣ್ಮಕ್ಕಳಿಗೆ ಕಣ್ಣು ಹಾಕಿದರೆ ಎರಡೂ ಕಣ್ಣುಗಳನ್ನು ಕಿತ್ತು ಬಿಸಾಡಬೇಕು ಎಂದರು.

ನಿಮ್ಮ ಯುವಕರಿಗೆ ಬುದ್ದಿ ಹೇಳಿ ಎಂದು ಮುಸಲ್ಮಾನ ಮುಖಂಡ, ಜಮಾತ್ ನವರಿಗೆ ಹೇಳಿದ್ದೆನೆ. ನಮ್ಮ ಹೆಣ್ಮಕ್ಕಳ ತಂಟೆಗೆ ಬರುವುದು ಬೇಡ. ಪ್ರತಿ ಸಲ ಇಂತಹ ಘಟನೆ ಮರುಕಳಿಸುತ್ತಿದೆ. ನೀವು ಅವರಿಗೆ ಸಹಕಾರ ಕೊಡ್ತಾ ಇದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮಗೆ ಮಹೇಶ ಅಂದ್ರೆ ಯಾರೂ ಮೊಹಮ್ಮದ್ ಅಂದ್ರೆ ಯಾರು ಗೊತ್ತಾಗಬೇಕು. ಸುನೀಲ್ ಮತ್ತು ಸಲ್ಮಾನ್ ನಡುವಿನ ವ್ಯತ್ಯಾಸ ಗೊತ್ತಿರಬೇಕು. ಅದನ್ನು ಬಿಟ್ಟು ಪ್ರೀತಿ-ಪ್ರೇಮದ ಹೆಸರಲ್ಲಿ ಅವರ ಹಿಂದೆ ಹೋದ್ರೆ ಶಿಲ್ಪಾ ದೇವಾಡಿಗ ಕಥೆಯೇ ಆಗುತ್ತದೆ. ಲವ್ ಜಿಹಾದಿಗೆ ಕೇರಳದಲ್ಲಿ ಬೇರೆಯೇ ಸೆಂಟರ್ ಇದೆ. ವಿಟ್ಲದ ಆತ್ಮಿಕಾ ಆತ್ಮಹತ್ಯೆ ಮತ್ತು ಶಿಲ್ಪಾ ದೇವಾಡಿಗ ಆತ್ಮಹತ್ಯೆ ಪ್ರಕರಣವನ್ನು ಎನ್ಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಇಲ್ಲಿಯ ಹಿಂದೂಗಳಿಗೆ ಗೌರವ ಕೊಡುವುದನ್ನು ಕಲಿಸಿ, ಗೋ ಹತ್ಯೆ ನಿಲ್ಲಿಸಿ, ಇದೇ ರೀತಿ ಮುಂದುವರೆದರೆ ಹಿಂದೂ ಸಮಾಜ ಅದೇ ರೀತಿ ಉತ್ತರ ನೀಡುತ್ತದೆ. ಮೊನ್ನೆ ಹಿಜಾಬ್ ಎಂದು ಬೊಬ್ಬೆ ಹಾಕಿದಾಗ ನಾವು ದೇವಸ್ಥಾನದಲ್ಲಿ ವ್ಯಾಪಾರ ನಿಷೇಧ ಹೇರಿ ಹಿಂದೂ ಸಮಾಜ ಉತ್ತರಿಸಿತ್ತು. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಕುಂದಾಪುರದಲ್ಲಿಯೂ ಹಿಂದೂಗಳು ಆರ್ಥಿಕ ಬಹಿಷ್ಕಾರ ಹಾಕಲಿದ್ದಾರೆ ಎಂದರು.

vtv vitla
vtv vitla
vtv vitla
- Advertisement -

Related news

error: Content is protected !!