Saturday, May 18, 2024
spot_imgspot_img
spot_imgspot_img

ಕುಂದಾಪುರ: ಕಟ್ಟೆ ಬೋಜಣ್ಣ ಆತ್ಮಹತ್ಯೆ ಪ್ರಕರಣ; ಡೆತ್‌ನೋಟ್‌ಪತ್ತೆ

- Advertisement -G L Acharya panikkar
- Advertisement -

ಕುಂದಾಪುರ: ವ್ಯಕ್ತಿಗಳಿಬ್ಬರು ಬಡ್ಡಿಯ ಆಮಿಷ ತೋರಿಸಿ ಹಣ ಮತ್ತು ಚಿನ್ನವನ್ನು ಪಡೆದು ಈವರೆಗೆ ಅಸಲು ಮತ್ತು ಬಡ್ಡಿಯನ್ನು ನೀಡದ ಕಾರಣ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಂದಾಪುರದ ಉದ್ಯಮಿ ಕಟ್ಟೆ ಬೋಜಣ್ಣ ಅವರು ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ ಪತ್ತೆಯಾಗಿದೆ.

ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಹಂಗಳೂರು ವಾಸ, ಬ್ರೋಕರ್ ಇಸ್ಮಾಯಿಲ್ ಸೇರಿ ನನಗೆ ಬಡ್ಡಿಯ ಆಮಿಷ ತೋರಿಸಿ 3 ಕೋಟಿ 34 ಲಕ್ಷ ರೂ‌. ನಗದು ಮತ್ತು 5ಕೆಜಿ 24 ಕ್ಯಾರೆಟ್ ಚಿನ್ನವನ್ನು ಕೆಲ 2013ರ ಫೆ. 31ರಂದು ಪಡೆದುಕೊಂಡಿದ್ದಾರೆ. ಆದರೆ ಇಲ್ಲಿ ತನಕ ಅಸಲು ಮತ್ತು ಬಡ್ಡಿಯನ್ನು ನೀಡಿಲ್ಲ ಎಂದು ಅವರು ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ವಿಚಾರ ತಿಳಿಸಿದ್ದರಿಂದ ಆರೇಳು ಬಾರಿ ಪಂಚಾತಿಕೆ ನಡೆಸಿದ್ದರು. ಈ ವೇಳೆ ಗಣೇಶ ಶೆಟ್ಟಿ ವಾಯಿದೆ ತೆಗೆದುಕೊಂಡಿದ್ದರೂ ಹಣ ನೀಡಿಲ್ಲ. ಚಿನ್ನ, ನಗದು ಮತ್ತು ಬ್ಯಾಂಕ್ ಬಡ್ಡಿ ಸೇರಿ 9 ಕೋಟಿ ರೂ.ಗೂ ಜಾಸ್ತಿ ಆಗುತ್ತದೆ. ಗಣೇಶ್ ಶೆಟ್ಟಿಯವರ ಮನೆಗೆ ಇದಕ್ಕಾಗಿ ಹಲವು ಬಾರಿ ಹೋದರೂ ಪ್ರಯೋಜನವಾಗಿಲ್ಲ. ಇದರಿಂದ ನೊಂದು ಗಣೇಶ್ ಶೆಟ್ಟಿಯವರ ಮನೆಯಲ್ಲೇ ರಿವಾಲ್ವರ್ ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ಮೊಳಹಳ್ಳಿ ಗಣೇಶ ಶೆಟ್ಟಿ ಮತ್ತು ಹಂಗಳೂರು ಇಸ್ಮಾಯಿಲ್ ಅವರಿಂದ ಹಣ ವಸೂಲಿ ಮಾಡಿಸಿ ನನ್ನ ಮನೆಯವರಿಗೆ ಕೊಡಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

- Advertisement -

Related news

error: Content is protected !!