Saturday, June 28, 2025
spot_imgspot_img
spot_imgspot_img

ಕುಂದಾಪುರ: ಕಳೆದುಕೊಂಡಿದ್ದ ಕರಿಮಣಿ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

- Advertisement -
- Advertisement -
vtv vitla

ಕುಂದಾಪುರ: ಆಟೋ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಕರಿಮಣಿ ಸರವನ್ನು ರಿಕ್ಷಾ ಚಾಲಕ ದಂಪತಿಗಳಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಬೈಂದೂರು ತಾಲೂಕು ಯಾಡ್ತರೆಯಿಂದ ನಡೆದಿದೆ.

ಬೆಂಗಳೂರಿನಿಂದ ಬಸ್ ನಲ್ಲಿ ಯೆಡ್ತೆರೆಗೆ ಬಂದಿಳಿದ ಶೋಭಾ ದಂಪತಿ ಆಟೋ ಚಾಲಕ ಅನಿಲ್ ಆಸ್ಕರ್ ಫೆರ್ನಾಂಡಿಸ್ ರಿಕ್ಷಾದಲ್ಲಿ ಅರೇಶಿರೂರಿಗೆ ಬಾಡಿಗೆ ಹೋಗಿದ್ದರು.

ಬಾಡಿಗೆ ಬಿಟ್ಟು ವಾಪಸ್ ಯೆಡ್ತೆರೆ ಸ್ಟ್ಯಾಂಡಿಗೆ ಬಂದು ರಿಕ್ಷಾ ಸ್ವಚ್ಫಗೊಳಿಸುತ್ತಿದ್ದಾಗ ಚಿನ್ನದ ಕರಿಮಣಿ ಸಿಕ್ಕಿದ್ದು , ಅದನ್ನು ಅನಿಲ್ ಪ್ರಾಮಾಣಿಕವಾಗಿ ಬೈಂದೂರು ಪೊಲೀಸ್ ಠಾಣೆಗೆ ತಂದು ಕೊಟ್ಟಿದ್ದರು. ಚಿನ್ನ ಕಳೆದುಹೋದ ಬಗ್ಗೆ ದೂರು ನೀಡಲು ಠಾಣೆಗೆ ಬಂದ ದಂಪತಿಗೆ ಚಿನ್ನದ ಕರಿಮಣಿ ತೋರಿಸಿದಾಗ ತನ್ನದೆಂದು ಗುರುತು ಪತ್ತೆ ಹಚ್ಚಿದರು.

ನಂತರ ಪೊಲೀಸರ ಸಮಕ್ಷಮದಲ್ಲಿ ವಾರಿಸುದಾರರಿಗೆ ಹಸ್ತಾಂತರಿಸಿದರು. ರಿಕ್ಷಾ ಚಾಲಕನ ಪ್ರಾಮಾಣಿಕತೆಗೆ ದಂಪತಿ ಹಾಗೂ ಪೊಲೀಸ್ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದರು.

- Advertisement -

Related news

error: Content is protected !!