- Advertisement -
- Advertisement -


ಕಾಸರಗೋಡು: ಎರಡು ಕಿಲೋ ಗಾಂಜಾ ಸಹಿತ ಓರ್ವ ಆರೋಪಿಯನ್ನು ಕಾಸರಗೋಡಿನ ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಪ್ಪಳ ಅಂಬಾರಿನ ಮುಹಮ್ಮದ್ ಆದಿಲ್ ಎಂದು ಗುರುತಸಲಾಗಿದೆ.
ಶನಿವಾರ ರಾತ್ರಿ ಉಪ್ಪಳ ಸಮೀಪದ ಮೈದಾನದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ಆದಿಲ್ ನನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ವಿಚಾರಿಸಿದಾಗ ಅಸ್ಪಷ್ಟ ಉತ್ತರ ನೀಡಿದ್ದು, ಈತನ ಬಳಿ ಇದ್ದ ಬ್ಯಾಗನ್ನು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಈತನ ಬೈಕ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
- Advertisement -








