ಕುಂದಾಪುರ: ಬಸ್ನಲ್ಲಿ ದೇವರ ಫೋಟೋಗೆ ಹೂವು ಇಡುತ್ತಿದ್ದ ವೇಳೆ ಬಸ್ ಕ್ಲೀನರ್ ಕುಸಿದು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಹಂಗಳೂರು ಗ್ರಾಮದ ಗ್ಯಾರೇಜ್ವೊಂದರಲ್ಲಿ ನಡೆದಿದೆ.
ಹುಬ್ಬಳ್ಳಿಯ ಬ್ಯಾಹಟ್ಟಿ ಗ್ರಾಮದ ಯಡ್ರಾವಿ ಓಣಿ ನಿವಾಸಿ ಪ್ರಸ್ತುತ ಕುಂದಾಪುರದ ಗ್ಯಾರೇಜ್ ವೊಂದರಲ್ಲಿ ಬಸ್ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಸುರೇಶ ನವಲೀಕ (42) ಮೃತಪಟ್ಟವರು.
ಸುಮಾರು 2 ತಿಂಗಳಿನಿಂದ ಕುಂದಾಪುರದ ಹಂಗಳೂರು ಗ್ರಾಮದ ದುರ್ಗಾಂಬಾ ಮೋಟಾರ್ಸ್ ಗ್ಯಾರೇಜಿನಲ್ಲಿ ಬಸ್ಸು ಅಟೆಂಡರ್ ಆಗಿ ಕೆಲಸ ಮಾಡಿಕೊಂಡಿದ್ದ ಸುರೇಶ ನವಲೀಕ ಅವರು ನಿನ್ನೆ ಸಂಜೆ ಬಸ್ಸು ಕ್ಲೀನ್ ಮಾಡಿ ದೇವರ ಫೋಟೋಗೆ ಹೂ ಇಡುತ್ತಿದ್ದ ಸಂದರ್ಭ ಒಮ್ಮೇಲೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇವರು ಹೃದಾಯಘಾತದಿಂದ ಅಥವಾ ಇನ್ಯಾವುದೋ ಆರೋಗ್ಯದ ಸಮಸ್ಯೆಯಿಂದ ಮೃತಪಟ್ಟಿರುವುದಾಗಿ ಮೃತರ ಅಣ್ಣ ಆಶೋಕ ವನವಲೂರ ಎಂಬವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.