Friday, March 29, 2024
spot_imgspot_img
spot_imgspot_img

ಕುಂದಾಪುರ: ವೃದ್ಧೆಯ ಚಿನ್ನದ ಸರ ಎಗರಿಸಿದ್ದ ಆರೋಪಿ ಬಂಧನ

- Advertisement -G L Acharya panikkar
- Advertisement -

ಕುಂದಾಪುರ: ಕಾಳಾವರ ಗ್ರಾಮದ ನಡುಬೆಟ್ಟು ಎಂಬಲ್ಲಿ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರು ಧರಿಸಿದ್ದ 75 ಸಾವಿರ ರೂ. ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದರೆ. ಬಂಧಿತ ಆರೋಪಿಯನ್ನು ತಿಲಕ್ ಕುಮಾರ್. ಎಮ್ ಎಂದು ಗುರುತಿಸಲಾಗಿದೆ.

ಏ. 29 ರಂದು ಈ ಘಟನೆ ನಡೆದಿದ್ದು ಅಪರಾಹ್ನ 12.10 ರ ಸುಮಾರಿಗೆ ಸ್ಥಳೀಯ ನಿವಾಸಿ ಪದ್ದಮ್ಮ ಶೆಡ್ತಿ ಎಂಬವರು ಮನೆಗೆ ನಡೆದುಕೊಂಡು ಹೋಗುತಿದ್ದ ವೇಳೆ ಆರೋಪಿ ರಸ್ತೆ ಬದಿ ಬೈಕ್ ನಿಲ್ಲಿಸಿಕೊಂಡು ಪದ್ದಮ್ಮ ಬಳಿ ‘ಇಲ್ಲಿ ರಾಮಣ್ಣನ ಮನೆ ಎಲ್ಲಿ’ ಎಂದು ಕೇಳಿದ್ದು, ಆ ಹೆಸರಿನವರು ಇಲ್ಲಿ ಯಾರೂ ಇಲ್ಲ ಎಂದು ಹೇಳುವಷ್ಟರಲ್ಲಿ ಕುತ್ತಿಗೆಯಲ್ಲಿದ್ದ ಎರಡು ಪವನ್ ತೂಕದ ಚಿನ್ನದ ಚೈನ್‌ನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿರುವ ಬಗ್ಗೆ ಪದ್ದಮ್ಮ ಶೆಡ್ತಿಅವರ ಪುತ್ರ ಅಶೋಕ್ ಶೆಟ್ಟಿ ಕುಂದಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ಹಣಕಾಸಿನ ತೊಂದರೆಯಿಂದ, ಸರಗಳ್ಳತನ ಮಾಡಿ ಬಸ್ರೂರು ಸೇವಾ ಸಂಘ ಸೊಸೈಟಿಯಲ್ಲಿ ಅಡವಿರಿಸಿರುವುದಾಗಿ ಆರೋಪಿ ತಿಲಕ್ ಕುಮಾರ್. ಎಮ್ ಒಪ್ಪಿಕೊಂಡಿದ್ದು, ಈತನಿಂದ ಕೃತ್ಯಕ್ಕೆ ಬಳಸಿದ ಹೋಂಡಾ ಹಾರ್ನೆಟ್ ಬೈಕ್ ಮತ್ತು ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!