Tuesday, April 30, 2024
spot_imgspot_img
spot_imgspot_img

ಕುಂಬಳೆ: ಕ್ವಾಟರ್ಸ್ ಮಾಲಕನ ಮೃತದೇಹ ಶೌಚಾಲಯದ ಹೊಂಡದಲ್ಲಿ ಪತ್ತೆ.!

- Advertisement -G L Acharya panikkar
- Advertisement -

ಕ್ವಾಟರ್ಸ್ ಮಾಲಕರೋರ್ವರನ್ನು ಕೊಲೆಗೈದು ಶೌಚಾಲಯದ ಹೊಂಡಕ್ಕೆ ತಳ್ಳಿದ ಘಟನೆ ಕುಂಬಳೆಯ ಸೀತಾಂಗೋಳಿ ಸಮೀಪದ ಬೇಲ ಎಂಬಲ್ಲಿ ನಡೆದಿದೆ.

ಶನಿವಾರ ಸಂಜೆ ಕೃತ್ಯ ಬೆಳಕಿಗೆ ಬಂದಿದೆ. ಸೀತಾಂಗೋಳಿ ಚೌಕಾರ್ ಪಿಲಿಪಳ್ಳದ ಥೋಮಸ್ ಕ್ರಾಸ್ತ(52) ಕೊಲೆಗೀಡಾದವರು. ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದಾರೆ. ಈ ಹಿನ್ನಲೆ ಸಂಶಯಗೊಂಡ ಸ್ಥಳೀಯರು ಹುಡುಕಾಟ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.

ಕೊಲೆ ಬಳಿಕ ಗೋಣಿ ಚೀಲದಲ್ಲಿ ಮೃತದೇಹವನ್ನಿರಿಸಿ ಶೌಚಾಲಯದ ಹೊಂಡದೊಳಗೆ ತಳ್ಳಿದ್ದು , ಮೃತದೇಹವನ್ನು ಆದಿತ್ಯವಾರ ಬೆಳಿಗ್ಗೆ ಹೊರ ತೆಗೆದು ಮಹಜರು ನಡೆಸಿದ್ದಾರೆ. ಥೋಮಸ್ ನ ಮಾಲಕತ್ವದ ಕ್ವಾಟರ್ಸ್ ನ ಸೆಪ್ಟಿಕ್ ಟ್ಯಾ೦ಕ್ ನಲ್ಲಿ ಮೃತದೇಹ ಪತ್ತೆಯಾಗಿದೆ.

ನಾಪತ್ತೆಯಾದುದರಿಂದ ಸ್ಥಳೀಯರು ಹುಡುಕಾಟ ನಡೆಸಿದಾಗ ಶೌಚಾಲಯದ ಹೊಂಡದ ಸ್ಲಾಬ್ ನ ಒಂದು ಬದಿ ಅರ್ಧ ತೆರೆದ ಸ್ಥಿತಿಯಲ್ಲಿ ಕಂಡು ಬಂದಿದ್ದು , ದುರ್ವಾಸನೆ ಬರುತ್ತಿತ್ತು. ಇದರಿಂದ ಸಂಶಯಗೊಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು , ಸ್ಥಳಕ್ಕೆ ಆಗಮಿಸಿದ ಪೊಲೀಸರು ತಪಾಸಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಕೊಳವೆ ಬಾವಿ ಗುತ್ತಿಗೆದಾರರಾಗಿದ್ದ ಥೋಮಸ್ ಕ್ರಾಸ್ತ ಬೋರ್ ವೆಲ್ ಕಂಪೆನಿ ಜೊತೆ ಸೇರಿಕೊಂಡು ಬೋರ್ ವೆಲ್ ನಿರ್ಮಾಣ ನಡೆಸುತ್ತಿದ್ದರು.

- Advertisement -

Related news

error: Content is protected !!