- Advertisement -
- Advertisement -
ಕುಡಿದ ಅಮಲಿನಲ್ಲಿ ಕ್ಯಾಂಟರ್ ಚಾಲಕನಿಂದ ಸರಣಿ ಅಪಘಾತ ನಡೆದಿದ್ದು, ಒಬ್ಬ ಬೈಕ್ ಸವಾರ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೊದಲಿಗೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಬಳಿ ಚಿಂತಾಮಣಿ-ಕೋಲಾರ ರಸ್ತೆಯಲ್ಲಿ ಕ್ಯಾಂಟರ್ ಡಿಕ್ಕಿಯಾಗಿ ಅಮೀನುಲ್ಲಾ ಎಂಬುವವರು ಮೃತಪಟ್ಟಿದ್ದಾರೆ.
ನಂತರ ಇದೇ ಕ್ಯಾಂಟರ್ ಕುರುಬೂರು ಫಾರಂ ಬಳಿ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದ್ದರಿಂದ ಆದಿಗೆರೆ ಗ್ರಾಮದ ಬೈಕ್ ಸವಾರ ಸಾಬೀರ್ ಖಾನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಕೋಲಾರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -