Friday, May 3, 2024
spot_imgspot_img
spot_imgspot_img

ಕೆ.ಜಿ.ಎಫ್ ಸಿನಿಮಾ ವೀಕ್ಷಣೆ ವೇಳೆ ಗುಂಡಿನ ದಾಳಿ; ಪ್ರಾಣಾಪಾಯದಿಂದ ಯುವಕ ಪಾರು

- Advertisement -G L Acharya panikkar
- Advertisement -

ಹಾವೇರಿ: ಸಿನಿಮಾ ವೀಕ್ಷಣೆ ಸಂದರ್ಭ ಕ್ಷುಲ್ಲಕ ಕಾರಣಕ್ಕೆ ಉಂಟಾದಂತಹ ಜಗಳ, ತಾರಕಕ್ಕೇರಿ ಗುಂಡು ಹಾರಿಸಿ, ಯುವಕನೊಬ್ಬನ ಕೊಲೆಗೆ ಯತ್ನಿಸಿರೋ ಘಟನೆ, ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ರಾಜೇಶ್ವರಿ ಚಿತ್ರಮಂದಿರದಲ್ಲಿ, ಕೆಜಿಎಪ್-2 ಚಿತ್ರವನ್ನು ನಿನ್ನೆ ರಾತ್ರಿ 10.30ರ ಸಂದರ್ಭದಲ್ಲಿ ಮುಂದಿನ ಸೀಟಿನಲ್ಲಿ ಕುಳಿತತಂಹ ವ್ಯಕ್ತಿಗೆ ಕಾಲು ತಗುಲಿತು ಎನ್ನುವ ಕಾರಣಕ್ಕೆ ಜಳ ಉಂಟಾಗಿದೆ. ಈ ಜಗಳ ತಾರಕ್ಕೇರಿ, ವ್ಯಕ್ತಿಯೊಬ್ಬ ವಸಂತಕುಮಾರ ಎಂಬಾತನ ಮೇಲೆ ಮೂರು ಸುತ್ತು ಗುಂಡು ಹಾರಿಸಿರೋದಾಗಿ ತಿಳಿದು ಬಂದಿದೆ.

ವ್ಯಕ್ತಿಯೊಬ್ಬ ಹಾರಿಸಿದಂತ ಗುಂಡು ವಸಂತ ಕುಮಾರ ಹೊಟ್ಟೆಗೆ ತಲುಗಿದ ಪರಿಣಾಮ, ಅವರು ತೀವ್ರವಾಗಿ ಗಾಯಗೊಂಡು, ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಹನುಮಂತರಾಯ ಅವರು, ಶಿಗ್ಗಾಂವಿ ಪಟ್ಟಣದ ರಾಜೇಶ್ವರಿ ಚಿತ್ರಮಂದಿರದಲ್ಲಿ ಶೂಟೌಟ್ ನಡೆದಿದ್ದು ನಿಜ ಎಂದಿದ್ದಾರೆ. ಚಿಕಿತ್ಸೆಯ ಬಳಿಕ ಪ್ರಾಣಾಪಾಯದಿಂದ ಪಾರಾಗಿರೋದಾಗಿ ತಿಳಿಸಿದ್ದಾರೆ. ಇನ್ನೂ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿತ್ರಮಂದಿರದಲ್ಲಿ ಗುಂಡುಗಳು ಸಿಕ್ಕಿವೆ. ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಂಡು ಹಾರಿಸಿದ ವ್ಯಕ್ತಿಯ ಪತ್ತೆಗಾಗಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!