Saturday, June 28, 2025
spot_imgspot_img
spot_imgspot_img

ಕೇರಳ : ಉಮ್ರಾ ಯಾತ್ರೆಗೆ ತೆರಳಿದ ಬಾಲಕ ಹೃದಯಾಘಾತದಿಂದ ಮೃತ್ಯು

- Advertisement -
- Advertisement -

ಕೇರಳ: ತನ್ನ ತಾಯಿ ಮತ್ತು ಒಡಹುಟ್ಟಿದವರ ಜೊತೆ ಕೇರಳದಿಂದ ಉಮ್ರಾಕ್ಕೆ ಬಂದಿದ್ದ ಬಾಲಕ ಮೆಕ್ಕಾದಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಕೋಝಿಕ್ಕೋಡ್ ಮುಕ್ಕಂ ಕಾರಸ್ಸೆರಿ ಕಕ್ಕಡ್ ನಿವಾಸಿ, ಚಕ್ಕಿಪರಂಬನ್ ಕುರಂಗನಂ ನಿವಾಸಿ ನಾಸರ್ ಮತ್ತು ಖದೀಜಾ ದಂಪತಿಯ ಪುತ್ರ ಅಬ್ದುಲ್ ರಹಮಾನ್ (9) ಮೃತರು. ಅಬ್ದುಲ್ರಹ್ಮಾನ್ ತನ್ನ ತಾಯಿ, ಸಹೋದರ ಮತ್ತು ಸಹೋದರಿಯೊಂದಿಗೆ ಉಮ್ರಾ ಮಾಡಲು ತೆರಳಿದ್ದರು. ಬಾಲಕನ ತಂದೆ ಮಕ್ಕಾದಲ್ಲಿದ್ದರು. ಸೋಮವಾರ ಉಮ್ರಾ ಮುಗಿಸಿ ತನ್ನ ಕೊಠಡಿಯಲ್ಲಿ ವಿಶ್ರಾಂತಿ ಪಡೆದು ಮಗ್ರಿಬ್ ನಮಾಜಿಗಾಗಿ ಮಸ್ಜಿದ್ ಅಲ್-ಹರಾಮ್ ಗೆ ತೆರಳುತ್ತಿದ್ದಾಗ ಕುಸಿದು ಬಿದ್ದಿದ್ದಾರೆ.

ಮಗುವನ್ನು ತಕ್ಷಣವೇ ಮಕ್ಕಾ ಕಿಂಗ್ ಅಬ್ದುಲಜೀಜ್ ಆಸ್ಪತ್ರೆಗೆ ಮತ್ತು ನಂತರ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಅವನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಚಿಕಿತ್ಸೆ ವೇಳೆ ಬಾಲಕ ಮೃತಪಟ್ಟಿದ್ದಾರೆ. ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೃತದೇಹ ಕಾರ್ಯವಿಧಾನದ ನಂತರ ಸಂಬಂಧಿಕರಿಗೆ ಹಸ್ತಾಂತರ ನಡೆಯಲಿದೆ. ಮೃತ ದೇಹವನ್ನು ಮಕ್ಕಾದಲ್ಲಿಯೇ ಅಂತ್ಯ ಸಂಸ್ಕಾರ ನಡೆಸಲು ಕುಟುಂಬ ನಿರ್ಧರಿಸಿದೆ.

- Advertisement -

Related news

error: Content is protected !!