- Advertisement -
- Advertisement -
ಕರ್ನಾಟಕ ಕೇರಳ ಗಡಿಭಾಗವಾಗಿರುವ ಕಲ್ಲಪ್ಪಳ್ಳಿ ಬಾಟೋಳಿ ಭಾಗದಲ್ಲಿ ಭೂಕುಸಿತವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸ್ಥಳೀಯರ ಮಾಹಿತಿ ಪ್ರಕಾರ ಈ ಭಾಗದಲ್ಲಿ ಭೂಮಿ ಸುಮಾರು ಒಂದೂವರೆ ಅಡಿಯಷ್ಟು ಕೆಳಕ್ಕೆ ಕುಸಿದಿದೆ.
ಕಳೆದ ಎರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಭೂಕುಸಿತವಾಗಿತ್ತು. ಇದೀಗ ಮತ್ತೆ ಇಲ್ಲಿಯೇ ಭೂಮಿ ಆಳಕ್ಕೆ ಕುಸಿದಿರುವುದು ಆತಂಕ ಹೆಚ್ಚಿಸಿದೆ. ಲ್ಲಿಯೇ ಪಕ್ಕದಲ್ಲಿ ಪಾಣತ್ತೂರು ಸುಳ್ಯ ಅಂತಾರಾಜ್ಯ ರಸ್ತೆ ಹಾದುಹೋಗಿದ್ದು, ಭೂಕುಸಿತದ ತೀವ್ರತೆ ಹೆಚ್ಚಿದಲ್ಲಿ ಸಂಚಾರಕ್ಕೆ ಸಂಚಕಾರ ಉಂಟಾಗಲಿದೆ ಎನ್ನಲಾಗಿದೆ.
- Advertisement -