- Advertisement -
- Advertisement -

ಮುಂಬೈ: ಕೋವಿಡ್ ಕಷ್ಟಕಾಲದಲ್ಲಿ ಹಗಲು ಇರುಳೆನ್ನದೆ ದುಡಿದ ವೈದ್ಯರಿಗೆ ಮಹಾರಾಷ್ಟ್ರ ಸರ್ಕಾರ ಗುಡ್ನ್ಯೂಸ್ ಒಂದನ್ನು ಕೊಟ್ಟಿದೆ. ಸರ್ಕಾರಿ ಮತ್ತು ಮುನಿಸಿಪಲ್ ಮೆಡಿಕಲ್ ಕಾಲೇಜ್ಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ಎಲ್ಲ ವೈದ್ಯರಿಗೂ ತಲಾ 1.21 ಲಕ್ಷ ಸಹಾಯಧನ ಘೋಷಿಸಿದೆ.

ಇತ್ತೀಚೆಗೆ ಮಹಾರಾಷ್ಟ್ರ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್(MARD) ವೈದ್ಯರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು. ಈ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ವೈದ್ಯರಿಗೆ ಸಹಾಯ ಧನ ಘೋಷಿಸಿದ್ದಾರೆ.



- Advertisement -