Saturday, April 27, 2024
spot_imgspot_img
spot_imgspot_img

ಗೋಕರ್ಣ ಕಡಲ ತೀರದಲ್ಲಿ ಮೂವರು ನೀರುಪಾಲು!

- Advertisement -G L Acharya panikkar
- Advertisement -

ಕಾರವಾರ : ಸಮುದ್ರದಲ್ಲಿ ಈಜಲು ತೆರಳಿದ ಓರ್ವನನ್ನು ರಕ್ಷಿಸಲು ಧಾವಿಸಿದ ನಾಲ್ವರ ಪೈಕಿ ಮೂವರು ಕಡಲ ಅಲೆಗೆ ಸಿಲುಕಿ ಸಾವನ್ನಪ್ಪಿದ್ದು. ಇಬ್ಬರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟ‌ನೆ ಗೋಕರ್ಣದಲ್ಲಿ ಗುರುವಾರ ನಡೆದಿದೆ.

ಮೃತರನ್ನು ಬೆಂಗಳೂರಿನ ತಿಪ್ಪೇಶ, ಸುಮಾ, ಹಾಗೂ ರವಿ ಎನ್ನಲಾಗಿದೆ.ಬೆಂಗಳೂರಿನಿಂದ 16 ಮಂದಿ ದೇವರ ದರ್ಶನ ಪಡೆಯಲು ಗೋಕರ್ಣಕ್ಕೆ ಆಗಮಿಸಿದ್ದರು. ದೇವರ ದರ್ಶನ ಪಡೆದ ನಂತರ ಯುವಕ ತಿಪ್ಪೇಶ್ ಸಮುದ್ರಕ್ಕಿಳಿದಿದ್ದಾನೆ. ಈ ವೇಳೆ ಅಲೆಯ ಅಬ್ಬರ ಆತನನ್ನು ನೀರಿನ ಒಳಕ್ಕೆ ಸೆಳೆಯಿತು.

ಇದನ್ನು ಗಮನಿಸಿದ ಸುಮಾ ಎಂಬ ಯುವತಿ ಆತನ ರಕ್ಷಣೆಗಾಗಿ ಧಾವಿಸಿದ್ದಾಳೆ ಆದರೆ ಆಕೆಯು ಕಡಲ ಸೆಳೆತಕ್ಕೆ ಸಿಲುಕಿದ್ದಾಳೆ ಇದನ್ನು ಗಮನಿಸಿದ ರವಿ, ರತ್ನಮ್ಮ ಹಾಗೂ ಪವಿತ್ರ ಸುಮಳನ್ನು ರಕ್ಷಿಸಲು ಮುಂದಾದರು. ದುರಾದೃಷ್ಟವಶಾತ್ ಸುಮಾ, ರವಿ ಕೂಡ ಸಮುದ್ರದ ಅಲೆಗೆ ಸಿಲುಕಿದರು.

ಈ ವೇಳೆಗೆ ಧಾವಿಸಿದ ಸ್ಥಳೀಯರು ಪವಿತ್ರ ಹಾಗೂ ರತ್ನಮ್ಮ ಎಂಬುವವರನ್ನು ರಕ್ಷಿಸಿದರು. ಸ್ಥಳೀಯ ಮೀನುಗಾರರು ರಕ್ಷಣೆಗೆ ಸಹಾಯ ಮಾಡಿದ್ದಾರೆ. ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಿಪ್ಪೇಶ, ಸುಮಾ, ರವಿ ಮೂವರ ಶವಗಳು ಪತ್ತೆಯಾಗಿವೆ ಎಂದು ಗೋಕರ್ಣ ಪಿಎಸ್ ಐ ನವೀನ್ ನಾಯ್ಕ ತಿಳಿಸಿದ್ದಾರೆ.

- Advertisement -

Related news

error: Content is protected !!