ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ದಿನಾಂಕ:10-03-2023ರಂದು ಮಾನಸಿಕ ಆರೋಗ್ಯ ಹಾಗೂ ಹದಿ ಹರೆಯದ ಸಮಸ್ಯೆಗಳು ವಿಷಯದ ಮೇಲೆ ತರಬೇತಿ ಕಾರ್ಯಕ್ರಮ ವಿಟ್ಲದ ಬಿ.ಸಿ.ಎಂ ಹಾಸ್ಟೆಲ್ ನಲ್ಲಿ ವಿಧ್ಯಾರ್ಥಿನಿಯರಿಗೆ ನಡೆಸಲಾಯಿತು.
ಜೆಸಿಐ ವಿಟ್ಲ ಘಟಕದ ಲೇಡಿ ಜೇಸಿ ಕಾರ್ಡಿನೇಟರ್ ಜೇಸಿ ಕವಿತಾ ಹೆಚ್. ಎಲ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಲಯನ್ ಡಾ.ಗಾಯತ್ರೀ ಪ್ರಕಾಶ್ ತರಬೇತಿ ನೀಡಿದರು. ಜೇಸಿಐ ವಿಟ್ಲ ಘಟಕದ ಅಧ್ಯಕ್ಷರಾದ ಜೇಸಿ ಪರಮೇಶ್ವರ ಹೆಗಡೆ ಯವರು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾದ ಬಿಂದಿಯಾ ಹಾಗೂ ಹಾಸ್ಟೇಲ್ ಸೂಪರಿಡೆಂಟ್ ಅನುಪಮ ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ ಚಂದ್ರಹಾಸ ಕೊಪ್ಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಕದ ಜೇಸಿ ಸದಸ್ಯರಾದ ಜೇಸಿ ಸೌಮ್ಯಚಂದ್ರಹಾಸ ವಿದ್ಯಾ ಮೋಹನ್ ಹಾಗೂ ಜೇಸಿ ಅಭಿಷೇಕ್ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು.
ಕಾರ್ಯಕ್ರಮದಲ್ಲಿ ಜೇಸಿಐ ವಿಟ್ಲ ಘಟಕದ ಪೂರ್ವಧ್ಯಾಕ್ಷರುಗಳು, ಪದಾಧಿಕಾರಿಗಳು, ಲೇಡಿ ಜೇಸಿ ಸದಸ್ಯರು, ವಿಧ್ಯಾರ್ಥಿಗಳು ಹಾಜರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಜೇಸಿಐ ವಿಟ್ಲ ಘಟಕದ ಜೊತೆ ಕಾರ್ಯದರ್ಶಿ ಜೇಸಿ ರಾಜೀವ್ ವಂದಿಸಿದರು
.