ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾ.09ರಂದು ಮಹಿಳಾ ದಿನಾಚರಣೆಯ ಉದ್ಘಾಟನೆ ಹಾಗೂ ಮಹಿಳಾ ಸಬಲೀಕರಣ ಮಾಹಿತಿ ಹಂಚಿಕೆ ಕಾರ್ಯಕ್ರಮ ಅಂಗನವಾಡಿ ಕೇಂದ್ರ ವಿಟ್ಲ ಇಲ್ಲಿ ನೆರವೇರಿತು.
ಜೆಸಿಐ ವಿಟ್ಲ ಘಟಕದ ಲೇಡಿ ಜೇಸಿ ಕಾರ್ಡಿನೇಟರ್ ಜೇಸಿ ಕವಿತಾ ಹೆಚ್. ಎಲ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜೇಸಿಐ ವಿಟ್ಲ ಘಟಕದ ಪೂರ್ವಾಧ್ಯಕ್ಷ ಜೇಸಿ ಸಿರಿ ಎಲ್. ಎನ್. ಕುಡೂರು ಕಾರ್ಯಕ್ರಮ ಉದ್ಘಾಟಿಸಿ ಮಹಿಳಾ ದಿನಾಚರಣೆಯ ಮಹತ್ವ ತಿಳಿಸಿ ಮಾತನಾಡಿದರು. ಜೇಸಿಐ ವಿಟ್ಲ ಘಟಕದ ಅಧ್ಯಕ್ಷ ಜೇಸಿ ಪರಮೇಶ್ವರ ಹೆಗಡೆ ಯವರು ಶುಭ ಹಾರೈಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ವಿದ್ಯಾ ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಸಾಂತ್ವನ ಕೇಂದ್ರದ ಸಹಾಯದ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಅತಿಥಿಗಳಾದ ರೂಪಕಲಾ ಹಾಗೂ ಅಂಗನವಾಡಿ ಶಿಕ್ಷಕಿ ಮೂಕಾಂಬಿಕಾ ರವರು ಉಪಸ್ಥಿತರಿದ್ದರು. ಘಟಕದ ಲೇಡಿ ಜೆಸಿ ಸದಸ್ಯರಾದ ಜೇಸಿ ಸಾರಿಕಾ ಚಂದ್ರಹಾಸ ಶೆಟ್ಟಿ, ಜೇಸಿ ಹೇಮಲತಾ ಜೈ ಕಿಶನ್, ಜೇಸಿ ಮಮತಾ ಸಂಜೀವ ಹಾಗೂ ಜೇಸಿ ಶಿವಾನಿ ಭಾಸ್ಕರ್ ಶೆಟ್ಟಿ ರವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು.ಕಾರ್ಯಕ್ರಮದಲ್ಲಿ ಜೇಸಿಐ ವಿಟ್ಲ ಘಟಕದ ಪೂರ್ವಧ್ಯಾಕ್ಷರುಗಳು, ಪದಾಧಿಕಾರಿಗಳು, ಲೇಡಿ ಜೇಸಿ, ಜೇಸಿ ಸದಸ್ಯರು, ಪೋಷಕರು ಹಾಗೂ ಪುಟಾಣಿಗಳು ಹಾಜರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಜೇಸಿಐ ವಿಟ್ಲ ಘಟಕದ ಕಾರ್ಯದರ್ಶಿ ಜೇಸಿ ದೀಕ್ಷಿತ್ ವಂದಿಸಿದರು.