- Advertisement -
- Advertisement -
ಬಾಗಲಕೋಟೆ: ಕೈದಿಗಳನ್ನು ಮನೆ ಕೆಲಸಕ್ಕೆ ಬಳಸಿಕೊಳ್ತಿರೋ ಬಾಗಲಕೋಟೆಯ ಜೈಲು ಅಧೀಕ್ಷಕನ ಕೃತ್ಯವೊಂದು ಇದೀಗ ಬೆಳಕಿಗೆ ಬಂದಿದೆ.
ವಿಚಾರಣಾಧೀನ ಕೈದಿಗಳನ್ನು ಹೊರಗೆ ಬಿಡುವಂತಿಲ್ಲ. ಆದರೆ ಜಿಲ್ಲಾ ಕಾರಾಗೃಹ ಅಧೀಕ್ಷಕ ದತ್ತಾತ್ರಿ ಮೇದಾ ಅವರು, ಕೈದಿಗಳನ್ನು ಮನೆಗೆ ಕರೆದುಕೊಂಡು ಹೋಗಿ ಕೆಲಸ ಮಾಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ.
ಮನೆ ಕೆಲಸ ಮಾಡಿ ಕೈದಿಗಳು ಹೊರಬರುತ್ತಿರುವ ವಿಡಿಯೊ ಲಭ್ಯವಾಗಿದೆ. ಬಾಗಲಕೋಟೆಯ ಕರ್ನಾಟಕ ಸಮಿತಿ ಪಕ್ಷದ ಕಾರ್ಯಕರ್ತರು ವಿಡಿಯೋ ಸೆರೆಹಿಡಿದಿದ್ದಾರೆ. ನಾಲ್ಕರಿಂದ ಐದು ಜನ ಕೈದಿಗಳನ್ನು ಮನೆ ಕೆಲಸಕ್ಕೆ ಬಳಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಇದು ತಿಳಿಯುತ್ತಲೇ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದಾಗ, ಹೆದರಿದ ಅಧೀಕ್ಷಕ, ಪ್ಲೀಸ್ ವಿಷಯ ದೊಡ್ಡದು ಮಾಡಬೇಡಿ. ಇವರು ಯಾವಾಗಲೂ ಬರೋದಿಲ್ಲ, ಯಾವಾಗಲೋ ಒಮ್ಮೆ ಕರಕೊಂಡ ಬಂದಿರ್ತಿನಿ ಅಷ್ಟೇ. ಅವರನ್ನೆಲ್ಲ ಕಳಿಸಿದ್ದೀನಿ.. ಸುಮ್ನೆ ಬಿಟ್ಟು ಬಿಟ್ಟು ಬಿಡಿ ಎಂದಿದ್ದಾರೆ.
- Advertisement -