Sunday, May 19, 2024
spot_imgspot_img
spot_imgspot_img

ಜೈಲಿನಲ್ಲಿರಬೇಕಾದ ಕೈದಿಗಳು ಕಾರಾಗೃಹ ಅಧೀಕ್ಷಕನ ಮನೆಯ ಕೆಲಸಕ್ಕೆ…!

- Advertisement -G L Acharya panikkar
- Advertisement -

ಬಾಗಲಕೋಟೆ: ಕೈದಿಗಳನ್ನು ಮನೆ ಕೆಲಸಕ್ಕೆ ಬಳಸಿಕೊಳ್ತಿರೋ ಬಾಗಲಕೋಟೆಯ ಜೈಲು ಅಧೀಕ್ಷಕನ ಕೃತ್ಯವೊಂದು ಇದೀಗ ಬೆಳಕಿಗೆ ಬಂದಿದೆ.

ವಿಚಾರಣಾಧೀನ ಕೈದಿಗಳನ್ನು ಹೊರಗೆ ಬಿಡುವಂತಿಲ್ಲ. ಆದರೆ ಜಿಲ್ಲಾ ಕಾರಾಗೃಹ ಅಧೀಕ್ಷಕ ದತ್ತಾತ್ರಿ ಮೇದಾ ಅವರು, ಕೈದಿಗಳನ್ನು ಮನೆಗೆ ಕರೆದುಕೊಂಡು ಹೋಗಿ ಕೆಲಸ ಮಾಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ.

ಮನೆ ಕೆಲಸ ಮಾಡಿ ಕೈದಿಗಳು ಹೊರಬರುತ್ತಿರುವ ವಿಡಿಯೊ ಲಭ್ಯವಾಗಿದೆ. ಬಾಗಲಕೋಟೆಯ ಕರ್ನಾಟಕ ಸಮಿತಿ ಪಕ್ಷದ ಕಾರ್ಯಕರ್ತರು ವಿಡಿಯೋ ಸೆರೆಹಿಡಿದಿದ್ದಾರೆ. ನಾಲ್ಕರಿಂದ ಐದು ಜನ ಕೈದಿಗಳನ್ನು ಮನೆ ಕೆಲಸಕ್ಕೆ ಬಳಸಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಇದು ತಿಳಿಯುತ್ತಲೇ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದಾಗ, ಹೆದರಿದ ಅಧೀಕ್ಷಕ, ಪ್ಲೀಸ್​ ವಿಷಯ ದೊಡ್ಡದು ಮಾಡಬೇಡಿ. ಇವರು ಯಾವಾಗಲೂ ಬರೋದಿಲ್ಲ, ಯಾವಾಗಲೋ ಒಮ್ಮೆ ಕರಕೊಂಡ ಬಂದಿರ್ತಿನಿ ಅಷ್ಟೇ. ಅವರನ್ನೆಲ್ಲ ಕಳಿಸಿದ್ದೀನಿ.. ಸುಮ್ನೆ ಬಿಟ್ಟು ಬಿಟ್ಟು ಬಿಡಿ ಎಂದಿದ್ದಾರೆ.

vtv vitla
- Advertisement -

Related news

error: Content is protected !!