Friday, April 19, 2024
spot_imgspot_img
spot_imgspot_img

“ಜೊತೆ ಜೊತೆಯಲಿ” ಧಾರಾವಾಹಿಯಿಂದ ನಟ ಅನಿರುದ್ಧ್ ಔಟ್‌

- Advertisement -G L Acharya panikkar
- Advertisement -

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ನಟ ಅನಿರುದ್ಧ್ ಹೊರ ನಡೆದಿದ್ದಾರೆ ಎನ್ನಲಾಗಿದೆ. ತುಂಬಾ ದಿವಸದಿಂದ ಅನಿರುದ್ಧ್ ಧಾರಾವಾಹಿ ತಂಡದ ಜೊತೆಗೆ ಕಿರಿಕ್‌ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಅವರು ಎರಡು ಬಾರಿ ಕೂಡ ಧಾರವಾಹಿಯಿಂದ ಹೊರೆ ನಡೆದಿದ್ದರು ಆದರೆ ಅನೇಕರ ಸಂಧಾನದ ಫಲವಾಗಿ ಅವರು ಅಮತ್ತೆ ಅದೇ ಧಾರಾವಾಹಿಯಲ್ಲಿ ನಟನೆ ಶುರು ಮಾಡಿದ್ದರು.

ಅಂದ ಹಾಗೇ ಆಗಸ್ಟ್ 18 ಧಾರಾವಾಹಿ ಚಿತ್ರೀಕರಣ ಮಾಡುವಾಗ ಅನಿರುದ್ಧ್ ಒಂದು ಸೀನ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು, ಚಿತ್ರೀಕರಣದವರು ಮನವೊಲಿಸಲು ಮುಂದಾದರು ಸಹ ಅವರು ಅದಕ್ಕೆ ಒಪ್ಪದೇ ಮನೆಗೆ ತೆರಳಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ನಡುವೆ ಕನ್ನಡ ಕಿರುತೆರೆಯಿಂದಲೇ ಅವರನ್ನು ಬ್ಯಾನ್‌ ಮಾಡಲು ಕೂಡ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಸಿನಿಮಾರಂಗದಲ್ಲಿ ಅವರು ಭಾರಿ ಹಿನ್ನಡೆ ಅನುಭವವಿಸಿದ ಬಳಿಕ ಕಿರುತೆರೆಯಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸಿದ್ದರು, ಆದರೆ ಅವರ ವರ್ತನೆಗಳೇ ಅವರಿಗೆ ಮುಳುವಾಗುತ್ತಿದ್ದು, ಅವರ ಮುಂದಿನ ಸಿನಿ ಪ್ರಯಾಣದ ಮೇಲೆ ಮೋಡ ಕವಿಯಲಿದೆ ಎನ್ನಲಾಗುತ್ತಿದೆ. ಇನ್ನೂ ತಮ್ಮ ವಿರುದ್ದ ಕೇಳಿ ಬಂದಿರುವ ಆರೋಪದ ಬಗ್ಗೆ ನಟ ಅನಿರುದ್ದ್‌ ಅವರು ಯಾವರೀತಿಯಲ್ಲಿ ತಮ್ಮ ಸಮರ್ಥನೆಯನ್ನು ಹೇಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಮುಂದೇನಾಗುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.

- Advertisement -

Related news

error: Content is protected !!