Thursday, May 2, 2024
spot_imgspot_img
spot_imgspot_img

ತುಪ್ಪ ಜಾರಿ ರೊಟ್ಟಿಗೆ ಬಿತ್ತು; ATM ಕಳ್ಳರು ಪೊಲೀಸರಿಂದಲೇ ಡ್ರಾಪ್‌ ಪಡೆದು ಸಿಕ್ಕಿಬಿದ್ದರು..!

- Advertisement -G L Acharya panikkar
- Advertisement -

ಎಟಿಎಂ ಯಂತ್ರ ಒಡೆದು ಹಣ ಕದಿಯಬೇಕು ಎಂದುಕೊಳ್ಳುವಷ್ಟರಲ್ಲಿ ಸಾರ್ಜಜನಿಕರ ಕಣ್ಣಿಗೆ ಬಿದ್ದ ಇಬ್ಬರು ಖದೀಮರು ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. ಕಳ್ಳರನ್ನೇ ಹಿಡಿಯಲು ಬಂದಿದ್ದ ಪೊಲೀಸರಿಲ್ಲಿಯೇ ಇವರು ಡ್ರಾಪ್‌ ಕೇಳಿದ್ದು ವಿಚಿತ್ರವಾದರೂ ಸತ್ಯ. ಇಂತಹದ್ದೊಂದು ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಮೇಳೆಕೋಟೆಯಲ್ಲಿ ನಡೆದಿದೆ.

ಎಟಿಎಂ ಯಂತ್ರ ಒಡೆದು ಹಣ ಕದಿಯಬೇಕು ಎಂದುಕೊಳ್ಳುವಷ್ಟರಲ್ಲಿ ಸಾರ್ಜಜನಿಕರ ಕಣ್ಣಿಗೆ ಬಿದ್ದ ಇಬ್ಬರು ಕಳ್ಳರು ತಪ್ಪಿಸಿಕೊಳ್ಳಲು ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಕೈ ತೋರಿಸಿ ಡ್ರಾಪ್ ಪಡೆದಿದ್ದಾರೆ. ಕಾರೊಳಗೆ ಹತ್ತಿ ಬಚಾವಾದೆವು ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಆ ಕಾರು ನೇರವಾಗಿ ಪೊಲೀಸ್​ ಠಾಣೆ ಮುಂದೆ ನಿಲ್ಲುತ್ತಿದ್ದಂತೆ ಕಳ್ಳರು ಅಚ್ಚರಿ ಜೊತೆ ಆಘಾತಕ್ಕೆ ಒಳಗಾಗಿದ್ದಾರೆ.

vtv vitla
vtv vitla

ಎಟಿಎಂ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದು ನೆಲಮಂಗಲ ತಾಲೂಕು ಅರಿಶಿನಕುಂಟೆ ನಿವಾಸಿಗಳಾದ ಸಚಿನ್ ಹಾಗೂ ಗಗನ್ ಎಂಬುವರು. ಆರೋಪಿಗಳನ್ನು ದೊಡ್ಡಬಳ್ಳಾಪುರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೇಳೆಕೋಟೆ ಎಂಟಿಬಿ ಕೇಂದ್ರ ದರೋಡೆಗೆ ಯತ್ನಿಸಿದ ಕಳ್ಳರಿಬ್ಬರು ಜನರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದರು. ಇದೇ ವೇಳೆ ಮಾಹಿತಿ ಪಡೆದ ಪೊಲೀಸರು ಖಾಸಗಿ ಕಾರಿನಲ್ಲಿ ಅದೇ ಮಾರ್ಗದಲ್ಲಿ ಬರುತ್ತಿದ್ದರು. ಈ ಬಗ್ಗೆ ಅರಿವೇ ಇಲ್ಲದ ಕಳ್ಳರು ಜನರಿಂದ ತಪ್ಪಿಸಿಕೊಳ್ಳಲು ಪೊಲೀಸರಿದ್ದ ಕಾರಿಗೆ ಕೈ ಅಡ್ಡಹಾಕಿ ಡ್ರಾಪ್​ ಕೇಳಿದ್ದರು.

- Advertisement -

Related news

error: Content is protected !!