Friday, April 26, 2024
spot_imgspot_img
spot_imgspot_img

ದಂಪತಿ ಕಲಹ ವಿಚಾರ; ಬುದ್ದಿ ಹೇಳಲು ಬಂದ ಮಾವ ಸಹಿತ ನಾಲ್ವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಳಿಯ; ಗಂಭೀರ ಸ್ಥಿತಿಯಲ್ಲಿದ್ದ ನಾಲ್ವರೂ ಸಾವು

- Advertisement -G L Acharya panikkar
- Advertisement -

ನಾರಾಯಣಪುರ: ದಂಪತಿ ಕಲಹ ವಿಚಾರದಲ್ಲಿ ಬುದ್ದಿ ಹೇಳಲು ಬಂದ ಮಾವ ಸಹಿತ ನಾಲ್ವರ ಮೇಲೆ ಅಳಿಯ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ಗಂಭೀರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದ ನಾಲ್ವರೂ ಅಸುನೀಗಿದ್ದಾರೆ.

ನಾಗೇಶ ಹಗರಗುಂಡ (35) ಹಾಗೂ ಶರಣಪ್ಪ ಸರೂರ (62) ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು. ಆರೋಪಿ ಶರಣಪ್ಪನ ಪತ್ನಿಯ ತಂದೆ ಸಿದ್ದರಾಮಪ್ಪ ಮುರಾಳ (62) ಹಾಗೂ ಮುತ್ತಪ್ಪ ಮುರಾಳ (38) ಇಬ್ಬರು ಗಂಭೀರ ಗಾಯಗಳೊಂದಿಗೆ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ತಡರಾತ್ರಿ ವೇಳೆಗೆ ಸಾವನ್ನಪ್ಪಿದ್ದಾರೆ.

ಇಲ್ಲಿನ ಛಾಯಾ ಕಾಲೊನಿಯಲ್ಲಿ ಆರೋಪಿ ಶರಣಪ್ಪ ಮತ್ತು ಪತ್ನಿಯ ನಡುವೆ ನಡೆಯುತ್ತಿದ್ದ ಜಗಳಕ್ಕೆ ಸಂಬಂಧಿಸಿದಂತೆ ಶರಣಪ್ಪನಿಗೆ ಬುದ್ದಿ ಹೇಳಲೆಂದು ಪತ್ನಿಯ ಕಡೆಯಿಂದ ನಾಲ್ವರು ಆತನ ಮನೆಗೆ ಆಗಮಿಸಿದ್ದರು. ಈ ವೇಳೆ ಆರೋಪಿಯು ಮಾವ ಸಹಿತ ನಾಲ್ವರನ್ನು ತನ್ನ ಮನೆಯ ಮೇಲ್ಚಾವಣಿ ಕೊಠಡಿಯಲ್ಲಿ ಮಾತುಕತೆ ನಡೆಸುವುದಕ್ಕಾಗಿ ಕರೆದೊಯ್ದಿದ್ದಾನೆ. ಬಳಿಕ ಕೊಠಡಿಯಲ್ಲಿ ನಾಲ್ವರನ್ನೂ ಕೂಡಿ ಹಾಕಿ ಬಾಗಿಲಿಗೆ ಬೀಗ ಜಡಿದು ಕಿಟಕಿ ಮೂಲಕ ನಾಲ್ವರ ಮೇಲೆ ಪೆಟ್ರೋಲ್ ಸಿಂಪಡಿಸಿ ಬೆಂಕಿ ಹಚ್ಚಿದ್ದಾನೆ. ಘಟನೆ ಕುರಿತು ಮಾಹಿತಿ ಪಡೆದುಕೊಂಡ ಪೊಲೀಸರು ತತ್‌ಕ್ಷಣ ಸ್ಥಳಕ್ಕಾಗಮಿಸಿ ನಾಲ್ವರನ್ನೂ ಸ್ಥಳೀಯರ ನೆರವಿನೊಂದಿಗೆ ಲಿಂಗಸೂಗುರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಈ ವೇಳೆ ಇಬ್ಬರು ಸಾವನ್ನಪ್ಪಿದ್ದರೆ, ಜೀವನ್ಮರಣ ಹೋರಾಟದಲ್ಲಿದ್ದ ಮತ್ತಿಬ್ಬರು ಬುಧವಾರ ತಡರಾತ್ರಿ ಸಾವನ್ನಪ್ಪಿದರು.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಶರಣಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗೇಶ ಎಂಬುವವರ ಶವವನ್ನು ಲಿಂಗಸೂಗುರು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಬುಧವಾರ ಸಂಬಂಧಿಕರಿಗೆ ಒಪ್ಪಿಸಲಾಯಿತು. ಶರಣಪ್ಪ ಸರೂರ, ಸಿದ್ದರಾಮಪ್ಪ ಮುರಾಳ, ಮುತ್ತಪ್ಪ ಮುರಾಳ ಅವರ ಮೃತದೇಹದ ಶವಪರೀಕ್ಷೆಯನ್ನು ಗುರುವಾರ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

- Advertisement -

Related news

error: Content is protected !!