Thursday, May 16, 2024
spot_imgspot_img
spot_imgspot_img

ದಿನಾ ಲೆಮನ್ ಟೀ ಕುಡಿದರೆ ಆರೋಗ್ಯ ಚೆನ್ನಾಗಿರುತ್ತೆ

- Advertisement -G L Acharya panikkar
- Advertisement -

ಇತ್ತೀಚಿನ ದಿನಗಳಲ್ಲಿ ಹೇಗೆ ಆಗಿ ಬಿಟ್ಟಿದೆ ಎಂದರೆ, ಹೆಚ್ಚಿನವರು ಒತ್ತಡದ ಜೀವನಶೈಲಿಗೆ ಒಳಗಾಗಿ ಬಿಟ್ಟಿದ್ದಾರೆ. ಸಂಸಾರದ ಹೊಣೆ ಒಂದು ಕಡೆಯಾದರೆ, ನಾವು ಕೂಡ ಆರ್ಥಿಕವಾಗಿ ಸದೃಢ ವಾಗಬೇಕು ಎನ್ನುವ ಭಾವನೆ ಇನ್ನೊಂದು ಕಡೆ, ಈ ಎಲ್ಲಾ ಜವಾಬ್ದಾರಿ, ಆಸೆ ಆಕಾಂಕ್ಷೆಗಳನ್ನು ಪೂರೈಸುವುದಕ್ಕಾಗಿ, ಬಿಡುವಿಲ್ಲದೆ ಕೆಲಸ ಮಾಡುವ ಜಾಯಮಾನದ ಜನರು ಎಷ್ಟೋ ಮಂದಿ ಇದ್ದಾರೆ. ಈ ಮಧ್ಯದಲ್ಲಿ ಸಿಗುವ ಅಲ್ಪ-ಸ್ವಲ್ಪ ಸಮಯವನ್ನು, ಸ್ವಲ್ಪನೂ ವ್ಯರ್ಥ ಮಾಡದೆ, ನಾಳೆಯ ಜೀವನದಲ್ಲಿ ತಾನೂ ಕೂಡ ಒಂದು ಮಟ್ಟದಲ್ಲಿ ನಿಲ್ಲಬೇಕು ಎನ್ನುವ ಒಂದೇ ಗುರಿಯನ್ನು ಇಟ್ಟು, ತನ್ನ ಸಮಯವನ್ನೆಲ್ಲಾ ಕೇವಲ ದುಡಿಮೆಗಾಗಿ ವಿನಿಯೋಗಿಸಿ ತಮ್ಮ ಜೀವನ ರೂಪಿಸಿಕೊಳ್ಳಲು ಮುಂದಾಗುತ್ತಾರೆ.

ಆದರೆ ಸಮಸ್ಯೆಗಳು ಕಾಡುವುದೇ ಇಲ್ಲಿ, ಒತ್ತಡದ ಜೀವನಶೈಲಿ, ಅತಿಯಾದ ಮಾನಸಿಕ ಒತ್ತಡದಿಂದಾಗಿ, ಕೆಲವೊಮ್ಮೆ ಸಣ್ಣ-ಪುಟ್ಟ ಸಮಸ್ಯೆಗಳಿಂದ ಹಿಡಿದು, ದೀರ್ಘಕಾಲದವರೆಗೆ ಕಾಡುವ ಸಮಸ್ಯೆ ಗಳು ಕಂಡು ಬರಲು ಶುರುವಾಗುತ್ತದೆ. ಕೆಲವೊಂದು ಸಮಸ್ಯೆಗಳು ದೀರ್ಘಕಾಲವರೆಗೆ, ಮನುಷ್ಯನಿಗೆ ಕಾಡುವುದರಿಂದ ಆತನ ದೈನಂದಿನ ಕೆಲಸಕ್ಕೆ ಅಥವಾ ಪ್ರತಿ ದಿನದ ಕಾರ್ಯ ಚಟುವಟಿಕೆಗೆ ಕೂಡ ಸಾಕಷ್ಟು ತೊಂದರೆ ಆಗುತ್ತದೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳುವುದರ ಜೊತೆಗೆ, ಪ್ರತಿದಿನ ಬೆಳಗ್ಗೆ ಅಥವಾ ಸಂಜೆಯ ಸಮಯದಲ್ಲಿ ನಿಂಬೆ ಚಹಾ ಅಥವಾ ಲೆಮನ್ ಟೀ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ಮಾನಸಿಕ ಒತ್ತಡ ಕಡಿಮೆಯಾಗಿ, ಅನೇಕ ರೀತಿಯ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ, ಮುಂದೆ ಓದಿ.

ಹೃದಯದ ಸಮಸ್ಯೆ ಇದ್ದರೆ

ದೇಹದ ಪ್ರಮುಖ ಅಂಗದಲ್ಲಿ ಒಂದಾಗಿರುವಂತಹ ಹೃದಯದ ಆರೋಗ್ಯದ ಬಗ್ಗೆ ಎಲ್ಲರೂ ಕೂಡ ಹೆಚ್ಚಿನ ಕಾಳಜಿ ವಹಿಸಬೇಕು. ಯಾಕೆಂದರೆ ಇಂದಿನ ಒತ್ತಡದ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಅತಿಯಾದ ಮಾನಸಿಕ ಒತ್ತಡದ ಕಾರಣದಿಂದಾಗಿ, ಹೆಚ್ಚಿನವರಿಗೆ ಹೃದಯದ ಸಮಸ್ಯೆ ಗಳು ಕಂಡು ಬರುತ್ತಿದೆ.

ಹೀಗಾಗಿ ಮೊದಲು ಒತ್ತಡದ ಜೀವನ ಶೈಲಿಯನ್ನು ನಿಯಂತ್ರಣ ಮಾಡಿಕೊಂಡರೆ, ಹೃದಯದ ಆರೋಗ್ಯ ಕೂಡ ಸರಿಯಾಗಿರುತ್ತದೆ. ಇದಕ್ಕಾಗಿ ಪ್ರತಿದಿನ ನಿಂಬೆ ಚಹಾ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡರೆ, ಮನಸ್ಸಿನ ಒತ್ತಡ ಕಡಿಮೆಯಾಗಿ, ಹೃದಯದ ಆರೋಗ್ಯವು ಕೂಡ ಸುಧಾರಣೆಯಾಗುವುದು.

ಮಧುಮೇಹ ಸಮಸ್ಯೆ ಇದ್ದವರು

ಮಧುಮೇಹ ಕಾಯಿಲೆ ಎನ್ನುವುದು ಸೈಲೆಂಟ್ ಕಿಲ್ಲರ್ ಇದ್ದ ಹಾಗೆ! ಈ ಕಾಯಿಲೆ, ಮನುಷ್ಯನಲ್ಲಿ ಒಮ್ಮೆ ಕಾಣಿಸಿಕೊಂಡರೆ, ಮತ್ತೆ ಆತನನ್ನು ಬಿಟ್ಟು ಹೋಗುವ ಕಾಯಿಲೆ ಅಲ್ಲವೇ ಅಲ್ಲ! ಹೀಗಾಗಿ, ಈ ಮಾರಕ ಕಾಯಿಲೆ ನಮ್ಮನ್ನು ಆವರಿಸಿಕೊಳ್ಳುವ ಮುನ್ನವೇ ಎಚ್ಚರಿಕೆ ವಹಿಸಿಕೊಳ್ಳುವುದು ಪ್ರತಿ ಯೊಬ್ಬರ ಕರ್ತವ್ಯವಾಗಿದೆ.
ಒಂದು ವೇಳೆ, ಈಗಾಗಲೇ ನಿಮಗೂ ಕೂಡ ಮಧುಮೇಹ ಸಮಸ್ಯೆ ಇದ್ದರೆ, ಪ್ರತಿದಿನ ಸಕ್ಕರೆ ಬೆರೆಸದ ನಿಂಬೆ ಹಣ್ಣಿನ ಚಹಾ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ರಕ್ತದಲ್ಲಿ ಸಕ್ಕರೆಮಟ್ಟ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ, ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗುವುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ, ಕೊರೊನಾ ವೈರಸ್ ಅಷ್ಟೇ ಅಲ್ಲ, ಎಂತಹ ವೈರಸ್ ದಾಳಿ ಮಾಡಿದರೂ ಕೂಡ, ಅದರಿಂದ ನಮ್ಮ ಆರೋಗ್ಯಕ್ಕೆ ಏನೂ ಸಮಸ್ಯೆ ಕಂಡು ಬರು ವುದಿಲ್ಲ. ಹೀಗಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ, ಕಡಿಮೆಯಾಗದಂತೆ ನೋಡಿಕೊಳ್ಳ ಬೇಕು. ಇದಕ್ಕಾಗಿ, ಆರೋಗ್ಯಕರವಾದ ಆಹಾರ, ವ್ಯಾಯಾಮ ಹಾಗೂಸರಿಯಾದ ಜೀವನಶೈಲಿಯನ್ನು ಅನುಸರಿಸಬೇಕು.

ಇನ್ನು ದೇಹದ ರೋಗನಿರೋಧಕ ಶಕ್ತಿ, ನೈಸರ್ಗಿಕವಾಗಿ ಹೆಚ್ಚಾಗಬೇಕು ಎಂದರೆ, ದಿನಕ್ಕೊಮ್ಮೆ ಆದರೂ ನಿಂಬೆಚಹಾ ಕುಡಿಯುವ ಅಭ್ಯಾಸ ಇಟ್ಟುಕೊಳ್ಳಬೇಕು. ಯಾಕೆಂದ್ರೆ, ನಿಂಬೆ ಚಹಾದಲ್ಲಿ, ನಿಂಬೆ ರಸವನ್ನು ಉಪಯೋಗಿಸುವುದರಿಂದ, ಇದರಲ್ಲಿರುವ ವಿಟಮಿನ್ ಸಿ ಅಂಶ, ನಮ್ಮ ಆರೋ ಗ್ಯಕ್ಕೆ ಸೇರಿ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ಅಧಿಕ ರಕ್ತದೊತ್ತಡದಂತಹ ಸಮಸ್ಯೆಯನ್ನು ಕೂಡ ನಿಯಂತ್ರಣ ಮಾಡುತ್ತದೆ.

ತೂಕ ಇಳಿಸುವವರಿಗೆ

ದೇಹದ ತೂಕ ಇಳಿಸಬೇಕು, ಸಮತೋಲಿತ ತೂಕದ ಜೊತೆಗೆ ಫಿಟ್ನೆಸ್ ಹಾಗೂ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಹಾಗಾದ್ರೆ ಪ್ರತಿದಿನ ನಿಂಬೆಹಣ್ಣಿನ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ದೇಹದ ತೂಕವನ್ನು ನೈಸರ್ಗಿಕವಾಗಿ ಕಡಿಮೆ ಮಾಡಿ ಕೊಳ್ಳಬಹುದು.

ಇದಕ್ಕೆ ಮುಖ್ಯ ಕಾರಣ ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹಾಗೂ ಕರಗುವ ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ, ದೇಹದ ತೂಕವನ್ನು ಕರಗಿಸುವಲ್ಲಿ ಪ್ರಮುಖ ಪಾತ್ರ ಬೀರುತ್ತವೆ.

ಅಧ್ಯಯನಗಳು ಹೇಳುವಂತೆ ನಿಂಬೆಹಣ್ಣಿನಲ್ಲಿ ಕಂಡುಬರುವ ನಾರಿನಾಂಶ, ದೇಹದಲ್ಲಿ ಸಂಗ್ರಹಣೆ ಗೊಂಡಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿ ಸುತ್ತದೆ, ಅಷ್ಟೇ ಅಲ್ಲದೆ ದೀರ್ಘ ಕಾಲದವರೆಗೆ ಹೊಟ್ಟೆ ಹಸಿವನ್ನು ದೂರಮಾಡುತ್ತದೆ. ಇದರಿಂದಾಗಿ ದೇಹದ ಕ್ಯಾಲೋರಿಗಳು ಬಹಳ ಬೇಗನೆ ಕರಿಗಿ, ದೇಹದ ತೂಕ ಕೂಡ ಕಡಿಮೆ ಆಗುತ್ತಾ ಬರುತ್ತದೆ.

ಲೆಮನ್ ಟೀ ಮಾಡುವ ವಿಧಾನ

ಒಂದು ಸಣ್ಣ ಪಾತ್ರೆಯಲ್ಲಿ ನೀರನ್ನು ಕುದಿಯಲು ಇಟ್ಟು, ಅದಕ್ಕೆ ಒಂದು ಟೀ ಚಮಚ ಚಹಾ ಪುಡಿ ಹಾಕಿ ಒಂದೆರಡು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಆಮೇಲೆ ಗ್ಯಾಸ್ ಆಫ್ ಮಾಡಿ, ನಂತರ ಈ ಪಾನೀಯಕ್ಕೆ ನಿಂಬೆ ಹಣ್ಣಿನ ರಸವನ್ನು ಹಿಂಡಿ, ಬೇಕಿದ್ದರೆ ಸ್ವಲ್ಪ ಸಕ್ಕರೆಯನ್ನು ಹಾಕಿ, ಚೆನ್ನಾಗಿ ಬೆರೆಸಿಕೊಳ್ಳಿ. ಆಮೇಲೆ ಇದನ್ನು ಸೋಸಿಕೊಂಡು, ಬಿಸಿಬಿಸಿ ಇರುವಾಗಲೇ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಆರೋಗ್ಯ ವೃದ್ಧಿಯಾಗಲು ಸಹಾಯವಾಗುತ್ತದೆ.

- Advertisement -

Related news

error: Content is protected !!