- Advertisement -
- Advertisement -
ವಿಟ್ಲ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಯ ಪಂಚಾಯತ್ ರಾಜ್ ವಿಭಾಗ ದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ರಾಗಿ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಯವರು ಆಯ್ಕೆ ಯಾಗಿರುತ್ತಾರೆ.
ಇವರನ್ನು ರಾಷ್ಟ್ರೀಯ ಅಧ್ಯಕ್ಷೆ ಮೀನಾಕ್ಷಿ ನಟರಾಜನ್ ಹಾಗು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ, ಕೆ ಶಿವಕುಮಾರ್ ರವರ ಅನುಮೋದನೆಯೊಂದಿಗೆ ಜಿಲ್ಲಾ ಕಾಂಗ್ರೆಸ್ ನಾಯಕರ ಸಲಹೆ ಯಂತೆ ರಾಜ್ಯ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ರಾದ ಶ್ರೀ ನಾರಾಯಣ ಸ್ವಾಮಿಯವರು ಈ ಆದೇಶ ಮಾಡಿರುತ್ತಾರೆ, ಇವರು ಕೊಳ್ನಾಡು ಗ್ರಾಮ ಪಂಚಾಯತ್ ನಲ್ಲಿ ಆರು ಭಾರಿ ಸದಸ್ಯ ರಾಗಿ ಎರಡು ಭಾರಿ ಅಧ್ಯಕ್ಷರಾಗಿ ಎರಡು ಭಾರಿ ಉಪಾಧ್ಯಕ್ಷರಾಗಿ ಕೆಲಸ ಮಾಡಿ ಜನ ಮನ್ನಣೆ ಗಳಿಸಿದ್ದು , ಪಂಚಾಯತ್ ಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
- Advertisement -