Saturday, June 28, 2025
spot_imgspot_img
spot_imgspot_img

ಬಂಟ್ವಾಳ: ನಿಲ್ಲಿಸಿದ್ದ ಆಟೋ ರಿಕ್ಷಾ ಕಳವು!!

- Advertisement -
- Advertisement -

ಬಂಟ್ವಾಳ: ಆಟೋ ಚಾಲಕರೊಬ್ಬರು ಆಟೋ ನಿಲ್ಲಿಸಿ ಪ್ರತಿಭಟನೆಗೆಂದು ತೆರಳಿದ್ದ ವೇಳೆ ಛ ಕಳವು ಆಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ ಕಸಬಾ ಗ್ರಾಮದ ಕೋಜೋಡಿ ನಿವಾಸಿ ಯೋಗೀಶ್‌ ಕುಮಾರ್‍ ಆಟೋ ರಿಕ್ಷಾವನ್ನು ಕಳೆದುಕೊಂಡ ವ್ಯಕ್ತಿ.

ಆಟೋ ಚಾಲಕರಾಗಿರುವ ಯೋಗೀಶ್‌ ಕುಮಾರ್‌ರವರು ಮಾ.08ರಂದು ಬೆಳಿಗ್ಗೆ 10.30ಕ್ಕೆ ಬಿ.ಸಿ ರೋಡಿನ ಲಯನ್ಸ್ ಕ್ಲಬ್ ಭವನದ ಹತ್ತಿರ ಆಟೋ ರಿಕ್ಷಾವನ್ನು ನಿಲ್ಲಿಸಿ ರೈತರ ಪ್ರತಿಭಟನೆಯಲ್ಲಿ ತೆರಳಿದ್ದರು.

ಪ್ರತಿಭಟನೆ ಮುಗಿದ ಬಳಿಕ ಮಧ್ಯಾಹ್ನ ಆಟೋ ರಿಕ್ಷಾ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ಆಟೋ ರಿಕ್ಷಾ ಇಲ್ಲದಿರುವುದು ಬೆಳಕಿಗೆ ಬಂದಿದೆ. ಸುತ್ತ ಮುತ್ತ ಹುಡುಕಿದರು ಸಿಗದೇ ಇದ್ದಾಗ ಆಟೋ ರಿಕ್ಷಾ ಕಳವು ಮಾಡಿಕೊಂಡು ಹೋಗಿರಬಹುದು ಎಂದು ಆಟೋ ಚಾಲಕ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!