- Advertisement -
- Advertisement -
ಕಾರ್ಕಳ: ನಿಲ್ಲಿಸಿದ್ದ ಟಿಪ್ಪರ್ಗೆ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಸವಾರೆ ಕಾಲೇಜು ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾಂತರಗೋಳಿ ಕುಂಟಲ್ಪಾಡಿಯ ಅಂಕಿತಾ ಆಚಾರ್ಯ ಎಂಬ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡವರು.
ನಿಲ್ಲಿಸಿದ್ದ ಟಿಪ್ಪರ್ಗೆ ಸ್ಕೂಟರ್ನಿಂದ ಢಿಕ್ಕಿ ಹೊಡೆದು ಆಕಸ್ಮಾತ್ ಆಗಿ ಕೆಳಕ್ಕೆ ಬಿದ್ದಿದ್ದಾರೆ. ಇದರ ಪರಿಣಾಮ ಮೂಗು, ಬಾಯಿ, ಕಿವಿಗಳಿಂದ ಅತೀ ರಕ್ತಸ್ರಾವ ಮತ್ತು ಕಣ್ಣಿನ ಸಮೀಪ ತೀವ್ರವಾದ ಗಾಯಗಳಾಗಿದ್ದು ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
- Advertisement -