Thursday, May 16, 2024
spot_imgspot_img
spot_imgspot_img

ನೆಲ್ಯಾಡಿ: ಮಾಂಸಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ವೇಳೆ ಆಪೆ ರಿಕ್ಷಾ ಪಲ್ಟಿ; ಆಪೆ ರಿಕ್ಷಾ ಸಮೇತ ಚಾಲಕ ಪರಾರಿ; ಓರ್ವ ಸೆರೆ!

- Advertisement -G L Acharya panikkar
- Advertisement -

ನೆಲ್ಯಾಡಿ: ಆಲಂಕಾರು ಪರಿಸರದಿಂದ ದನ ಮತ್ತು ಹೋರಿಗಳನ್ನು ಮಾಂಸಮಾಡುವ ಉದ್ದೇಶದಿಂದ ಕಳ್ಳತನ ಮಾಡಿ ಅಕ್ರಮ ಸಾಗಾಟ ಮಾಡುತ್ತಿದ್ದ ಆಪೆ ರಿಕ್ಷಾವೊಂದು ನೆಲ್ಯಾಡಿ ಗ್ರಾಮದ ತೋಟ ಎಂಬಲ್ಲಿ ಪಲ್ಟಿಯಾಗಿರುವ ಘಟನೆ ಸೆ.23ರಂದು ರಾತ್ರಿ ನಡೆದಿದೆ.

ಆಲಂಕಾರಿನಿಂದ ಹೋರಿ ಹಾಗೂ ದನವೊಂದನ್ನು ಕೈ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಆಲಂಕಾರು-ನೆಲ್ಯಾಡಿ ಮಾರ್ಗವಾಗಿ ಕೊಕ್ಕಡಕ್ಕೆ ಸಾಗಾಟ ಮಾಡುತ್ತಿದ್ದು, ಈ ವೇಳೆ ರಿಕ್ಷಾ ಪಲ್ಟಿಯಾಗಿದೆ.

ಆರೋಪಿಗಳು ಪಲ್ಟಿಯಾಗಿದ್ದ ರಿಕ್ಷಾವನ್ನು ನಿಲ್ಲಿಸಿ ಕೆಳಕ್ಕೆ ಬಿದ್ದಿದ್ದ ದನ ಮತ್ತು ಹೋರಿಯನ್ನು ಪುನ: ಆಪೆ ರಿಕ್ಷಾದಲ್ಲಿ ತುಂಬಿಸಲು ಮುಂದಾಗಿದ್ದರು. ಈ ವೇಳೆ ಜನ ಸೇರುತ್ತಿದ್ದಂತೆ ಆಪೆ ರಿಕ್ಷಾ ಚಾಲಕ ಸಫೀಕ್ ಎಂಬಾತ ರಿಕ್ಷಾ ಸಮೇತ ಪರಾರಿಯಾಗಿದ್ದಾನೆ. ಸ್ಥಳದಲ್ಲಿದ್ದ ಮತ್ತೊಬ್ಬನನ್ನು ವಿಚಾರಿಸಿದಾಗ ಆತ ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಗುರುಪ್ರಸಾದ್(20) ಎಂದು ಹೇಳಿದ್ದು, ಪರಾರಿಯಾದವನ ಬಗ್ಗೆ ಕೇಳಿದಾಗ ಸಫೀಕ್ ಎಂದು ಹೇಳಿದ್ದಾನೆ. ಇಬ್ಬರು ಸೇರಿಕೊಂಡು ಮಾಂಸಮಾಡುವ ಉದ್ದೇ ಶದಿಂದ ದನ ಮತ್ತು ಹೋರಿಯನ್ನು ಆಲಂಕಾರು ಪ್ರದೇಶದಿಂದ ಕದ್ದುಕೊಂಡುಹೋಗುತ್ತಿರುವುದಾಗಿ ತಿಳಿಸಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳದಲ್ಲಿ ದೊರೆತ ಆರೋಪಿಯ ಮೊಬೈಲ್ ಮತ್ತು 22,000 ರೂ. ಮೌಲ್ಯ ದ ದನ ಮತ್ತು ಹೋರಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯ ಕುರಿತು ನೆಲ್ಯಾ ಡಿ ಗ್ರಾಮದತೋಟ ನಿವಾಸಿ ಚೇತನ್ ಎಂಬವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

driving
- Advertisement -

Related news

error: Content is protected !!