Saturday, April 20, 2024
spot_imgspot_img
spot_imgspot_img

ನೆಲ್ಯಾಡಿ: ಯುವಕನಿಗೋಸ್ಕರ ಧರಣಿ ಕುಳಿತ ಮಹಿಳೆ; ಅಸ್ವಸ್ಥಗೊಂಡು ಆಸ್ಪತ್ರಗೆ ದಾಖಲು

- Advertisement -G L Acharya panikkar
- Advertisement -

ನೆಲ್ಯಾಡಿ: ಯುವಕನನ್ನು ಅರಸಿ ಬಂದ ಮಹಿಳೆ ಎರಡು ಗಂಟೆಗೂ ಅಧಿಕ ಹೊತ್ತು ಬಿಸಿಲಲ್ಲೇ ಕುಳಿತು ಅಸ್ವಸ್ಥಗೊಂಡ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.

ಮಂಗಳೂರಿನಲ್ಲಿ ಕೆಲಸಕ್ಕಿದ್ದ ವೇಳೆ ನೆಲ್ಯಾಡಿಯ ಯುವಕನಿಗೆ ಅಲ್ಲಿ ವಿವಾಹಿತ ಮಹಿಳೆಯೋರ್ವರ ಪರಿಚಯವಾಗಿದ್ದು, ಇವರಿಬ್ಬರು ಅನ್ಯೋನ್ಯತೆಯಿಂದ ಇದ್ದರೆಂದು ಹೇಳಲಾಗಿದೆ. ಈ ನಡುವೆ ಯುವಕ ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದು ಬಳಿಕ ಮಹಿಳೆಯ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮಹಿಳೆ ಮಂಗಳೂರಿನಿಂದ ನೆಲ್ಯಾಡಿಗೆ ಬಂದು ಯುವಕನ ಮನೆಗೆ ಹೋಗಿದ್ದರು. ಆದರೆ ಯುವಕನ ಮನೆಯವರು ಮಹಿಳೆಯನ್ನು ಮನೆಯೊಳಗೆ ಸೇರಿಸಲು ನಿರಾಕರಿಸಿದ ಕಾರಣ ಆಕೆ ಯುವಕನ ಮನೆ ಮುಂಭಾಗದಲ್ಲಿರುವ ಮರವೊಂದರ ಅಡಿಯಲ್ಲಿಯೇ ಕುಳಿತು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಕೆ ಹಾಕಿದರೆಂದು ಹೇಳಲಾಗಿದೆ. ಮರದಡಿಯಲ್ಲಿಯೇ ಸುಮಾರು ೨ ತಾಸಿಗೂ ಹೆಚ್ಚು ಸಮಯ ಅನ್ನ, ನೀರು ಇಲ್ಲದೇ ಕುಳಿತಿದ್ದ ಮಹಿಳೆ ಅಲ್ಲಿಯೇ ಅಸ್ವಸ್ಥಗೊಂಡು ಬಿದ್ದಿದ್ದರು.

ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಗ್ರಾಮ ಪಂಚಾಯತ್‌ ಸದಸ್ಯರು ಸ್ಥಳಕ್ಕೆ ತೆರಳಿ ಸ್ಥಳೀಯರ ನೆರವಿನೊಂದಿಗೆ ಮಹಿಳೆಯನ್ನು ರಿಕ್ಷಾವೊಂದರಲ್ಲಿ ನೆಲ್ಯಾಡಿ ಪೇಟೆಗೆ ಕರೆತಂದು ಉಪಚರಿಸಿ ಬಳಿಕ ಅದೇ ರಿಕ್ಷಾದಲ್ಲಿ ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

vtv vitla
- Advertisement -

Related news

error: Content is protected !!