Tuesday, April 16, 2024
spot_imgspot_img
spot_imgspot_img

ಮಂಗಳೂರು: ಮಗುವಿನ ಹುಟ್ಟಿದ ದಿನ ಆದ್ದೂರಿಯಾಗಿ ಮಾಡೋಣ ಎಂದಿದ್ದ ತಂದೆ ಆತ್ಮಹತ್ಯೆ.!

- Advertisement -G L Acharya panikkar
- Advertisement -

ಮಂಗಳೂರು: ಮಗಳ ಹುಟ್ಟಿದ ದಿನಕ್ಕೆ ಅದ್ದೂರಿ ಪಾರ್ಟಿ ಮಾಡೋಣ ಎನ್ನುತ್ತಿದ್ದ ತಂದೆಯ ತಿಥಿ ಕಾರ್ಯ ಮಾಡುವ ದೌರ್ಭಾಗ್ಯ ಎದುರಾದ ಘಟನೆ ನಡೆದಿದೆ. ಪತ್ನಿ ಮೇಲಿನ ಕೋಪದಲ್ಲಿ ಐದು ವರ್ಷದ ಮಗುವನ್ನು ಮರೆತು ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಲ್ಯ ಕಣೀರುಬೀಡು ಎಂಬಲ್ಲಿ ನಡೆದಿದೆ.

ಆತ್ಮಹತ್ಯೆಗೈದ ವಕ್ತಿಯನ್ನು ಕಣೀರು ತೋಟ ನಿವಾಸಿ ಪ್ರವೀಣ್ ಪೂಜಾರಿ(34) ಎನ್ನಲಾಗಿದೆ. ಪ್ರವೀಣ್ ಖಾಸಗಿ ಬಸ್ಸಿನಲ್ಲಿ ಚೆಕ್ಕರ್ ಆಗಿ ಕೆಲಸ ನಿವರ್ಹಿಸುತ್ತಿದ್ದರು. ಪತ್ನಿ ಕೆಲಸದಿಂದ ಮರಳಿದಾಗ ಕೋಣೆಯೊಳಗಿನ ಪಕ್ಕಾಸಿಗೆ ಪ್ರವೀಣ್ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ತಿಳಿದು ಬಂದಿದೆ. ಕೂಡಲೇ ಪ್ರವೀಣ್ ಅವರನ್ನ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು. ಆತ್ಮಹತ್ಯೆಗೆ ದಾಂಪತ್ಯ ಕಲಹವೇ ಕಾರಣ ಎಂದು ಶಂಕಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಪ್ರವೀಣ್ ಪ್ರೇಮ ವಿವಾಹವಾಗಿದ್ದು ದಂಪತಿಗೆ ಐದು ವರ್ಷದ ಮುದ್ದಾದ ಹೆಣ್ಮಗು ಇದೆ. ಮುಂದಿನ ವಾರ ಮಗುವಿನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತೇನೆಂದು ಹೇಳುತ್ತಿದ್ದ ಪ್ರವೀಣ್ ಆತ್ಮಹತ್ಯೆಗೈದಿದ್ದು ಮಗುವಿನ ಹುಟ್ಟುದಿನದಂದೇ ತಂದೆಯ ತಿಥಿ ಮಾಡುವ ದೌರ್ಭಾಗ್ಯ ಒದಗಿಬಂದಿದೆ.

- Advertisement -

Related news

error: Content is protected !!