Saturday, April 27, 2024
spot_imgspot_img
spot_imgspot_img

ನೇರಳಕಟ್ಟೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಅಬೂಬಕ್ಕರ್ ಎನ್.ಕೆ, ಉಪಾಧ್ಯಕ್ಷರಾಗಿ ನಂದಿತಾ ಆಯ್ಕೆ

- Advertisement -G L Acharya panikkar
- Advertisement -
driving

ವಿಟ್ಲ: ದ.ಕ. ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಅಬೂಬಕ್ಕರ್ ಎನ್.ಕೆ, ಉಪಾಧ್ಯಕ್ಷರಾಗಿ ನಂದಿತಾ ಆಯ್ಕೆಯಾಗಿದ್ದಾರೆ.

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್.ಡಿ.ಎಂ.ಸಿ ರಚನಾ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಕೀಲಾ ಕೆ. ಪೂಜಾರಿ, ಸದಸ್ಯರಾದ ಲತೀಫ್ ನೇರಳಕಟ್ಟೆ, ಧನುಂಜಯ ಗೌಡ, ಅಶೋಕ ರೈ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಗಟ್ಟಿ ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಸದಸ್ಯರುಗಳಾಗಿ ನಿರಂಜನ್ ರೈ ಕುರ್ಲೆತ್ತಿಮಾರು, ಅಬ್ದುಲ್ ರಹಿಮಾನ್ ಪರ್ಲೊಟ್ಟು, ಅತಾವುಲ್ಲಾ ನೇರಳಕಟ್ಟೆ, ಚಂದ್ರಶೇಖರ ಪೆರಾಜೆ, ಸಾಹುಲ್ ಹಮೀದ್ ಪರ್ಲೊಟ್ಟು, ಹಂಝ ನೇರಳಕಟ್ಟೆ, ರಶೀದ್ ಪರ್ಲೊಟ್ಟು, ಮೋಹನ ಗೌಡ ಪೆರಾಜೆ, ಭಾರತಿ ಮುರುವ, ಮೋಹಿನಿ ನೇರಳಕಟ್ಟೆ, ರೇಣುಕಾ ಪರ್ಲೊಟ್ಟು, ಹೇಮಾವತಿ, ಲತಾ ನೆಕ್ಕರೆಮಠ, ಸುಮಯ್ಯ ನೇರಳಕಟ್ಟೆ, ಸಫಿಯ ನೇರಳಕಟ್ಟೆ, ಹಾಗೂ ನೆಬಿಸ ಕೋಚಪಲ್ಕೆ ಅವರು ಆಯ್ಕೆಯಾಗಿದ್ದಾರೆ.

ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಸ್ವಾಗತಿಸಿ, ನಿರೂಪಿಸಿದರು. ಸಹ ಶಿಕ್ಷಕಿಯರಾದ ಗೀತಾ ಪ್ರಸ್ತಾವನೆಗೈದರು, ಲೀಲಾವತಿ ವಂದಿಸಿದರು.
ಸೇಸಪ್ಪ ನಾಯ್ಕ್, ಹಾಗೂ ಸುಧಾಕರ ಶೆಟ್ಟಿ ಸಹಕರಿಸಿದರು.

- Advertisement -

Related news

error: Content is protected !!