Sunday, June 29, 2025
spot_imgspot_img
spot_imgspot_img

ಪಾಣೆಮಂಗಳೂರು: ಪ್ರಾರ್ಥನೆಯ ಪರಿಪೂರ್ಣತೆಗಾಗಿ ಶ್ರೀ ಕಟೀಲ್ ಪ್ರೀಮಿಯಂ ಅಗರಬತ್ತಿಯ ಬಿಡುಗಡೆ ಸಮಾರಂಭ

- Advertisement -
- Advertisement -

ಪಾಣೆಮಂಗಳೂರು: ಘಮ ಘಮ ಅನ್ನೋ ಅಗರಬತ್ತಿಗಳು.. ಭಕ್ತಿಯನ್ನು ಇಮ್ಮಡಿಗೊಳಿಸಿ ಸುಗಂಧ ಸೂಸುವ ವಿವಿಧ ಸುವಾಸನೆಯ ಅಗರಬತ್ತಿಗಳು. ಕಾಫಿ, ಪೈನ್ ಆಪಲ್, ಲಿಚಿ, ಕಾರಂಜಿ ಮತ್ತು ಸ್ಯಾಂಡಲ್ ಹೀಗೆ ಐದು ಬಗೆಯ ಅಗರಬತ್ತಿಗಳು ಇನ್ನು ಮುಂದೆ ನಿಮ್ಮ ಮನೆ ಬಾಗಿಲಿಗೆ ತಲುಪಲಿದೆ.

ಕಾರಂಜಿ ಗ್ರೂಪ್ “ಶ್ರೀ ಕಟೀಲ್” ಬ್ರಾಂಡ್ ಮೂಲಕ ಅಗರಬತ್ತಿ ಉದ್ಯಮಕ್ಕೆ ಹೊಸ ಮುನ್ನುಡಿ ಬರೆಯುತ್ತಿದೆ. ಅಗರಬತ್ತಿ ಉತ್ಪಾದನಾ ಹಾಗೂ ಪ್ರಧಾನ ಮಾರಾಟ ಮಳಿಗೆ ಶುಭಾರಂಭಗೊಂಡಿದೆ.

ಪಾಣೆಮಂಗಳೂರಿನ ಜೆ ಕೆ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ಶ್ರೀ ಕಟೀಲ್ ಅಗರಬತ್ತಿಯ ಉತ್ಪಾದನಾ ಕೇಂದ್ರ ಶುಭಾರಂಭಗೊಂಡಿದೆ. ಸ್ವಾತಿ ಸುದೇಶ್ ಶಂಬುಗ ಮಾಲೀಕತ್ವದ ಈ ಸಂಸ್ಥೆಯ ಐದು ಬಗೆಯ ಅಗರಬತ್ತಿಗಳು ಇನ್ನು ಮುಂದೆ ಕರಾವಳಿಯ ಮಾರುಕಟ್ಟೆಗಳಲ್ಲಿ ಲಭ್ಯವಿರಲಿದೆ.

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಎನ್.ಕೆ.ಜಿ ಕುಡ್ವಾ, ಪಿ.ವಿ ಶೆಣೈ, ಕುಮುದಾ ಕುಡ್ವಾ, ಇಂಡೇನ್ ಗ್ಯಾಸ್ ವಿತರಕರಾದ ಜಗನ್ನಾಥ್ ಚೌಟ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ಪ್ರಮುಖ ಸಂದೇಶ್ ಕುಮಾರ್ ಶೆಟ್ಟಿ, ಶ್ರೀ ಉಳ್ಳಾಲ್ತಿ ದೈವಸ್ಥಾನ ಮಾಣಿ ಇದರ ವ್ಯವಸ್ಥಾಪನಾ ಟ್ರಸ್ಟೀ ಮಾಣಿ ಗುತ್ತು ಸಚಿನ್ ರೈ.

ಪಿಂಗಾರ ಎಂಟರ್ಪ್ರೈಸಸ್‌ನ ಗಣೇಶ್ ರೈ ಮಾಣಿ, ಶ್ರೀ ದುರ್ಗಾ ಕನ್ಸ್ ಷ್ಟ್ರಕ್ಷನ್ ನೆಲ್ಲಿ ಇದರ ಗೋಪಾಲ ಮೂಲ್ಯ ನೆಲ್ಲಿ ಶಂಬುಗ, ದೇವಿಪ್ರಸಾದ್ ಶೆಟ್ಟಿ ಬೆಂಞತ್ತಿಮಾರು ಸೇರಿದಂತೆ ಮೊದಲಾದವರು ಜೊತೆಗಿದ್ದು ಶುಭಹಾರೈಸಿದರು.

driving
- Advertisement -

Related news

error: Content is protected !!