- Advertisement -
- Advertisement -
ಪುಂಜಾಲಕಟ್ಟೆ : ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಡಂತ್ಯಾರು ಬಳಿಯ ನಡುಬೆಟ್ಟು ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನವು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸಾವನ್ನಪ್ಪಿದ ಘಟನೆ ಬುಧವಾರ ನ.23ರಂದು ನಡೆದಿದೆ.
ಮೃತರನ್ನು ಮಡಂತ್ಯಾರು ಸಮೀಪದ ಪಾರೆಂಕಿ ನಿವಾಸಿ ವಸಂತ ನಾಯಕ್ ಅವರ ಪುತ್ರ ಶಿವಪ್ರಸಾದ್ (19) ಎಂದು ಗುರುತಿಸಲಾಗಿದೆ. ಶಿವಪ್ರಸಾದ್ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ನಲ್ಲಿ ಪ್ರಥಮ ಬಿಸಿಎ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
- Advertisement -