- Advertisement -
- Advertisement -
ಸುಳ್ಯ: ಕರಾವಳಿಯಲ್ಲಿ ಆಗಾಗ ಕೋಮು ಸಂಘರ್ಷಗಳು ನಡೆಯುತ್ತಾ ಇದ್ದರೂ, ಧರ್ಮ ಸಂಘರ್ಷದ ನಡುವೆ ಹಿಂದು -ಮುಸ್ಲಿಂ ಸುಳ್ಯದಲ್ಲಿ ಸೌಹಾರ್ದ ಮೆರೆದ ಫೋಟೊ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ. ಅಯ್ಯಪ್ಪ ಸ್ವಾಮಿ ಮಾಲೆ ಹಾಕಿರುವ ಪುಟಾಣಿ ಮಗುವನ್ನು ಕೈ ಹಿಡಿದು ಮುಸ್ಲಿಂ ವ್ಯಕ್ತಿಯೊಬ್ಬರು ರಸ್ತೆ ದಾಟಿಸಿದ್ದಲ್ಲದೆ, ಹಣ್ಣು ಹಂಪಲು ತೆಗೆದುಕೊಟ್ಟು ಉಪಚರಿಸಿದ್ದು ಜನರ ಗಮನ ಸೆಳೆದಿದೆ.
ಸುಳ್ಯದ ಕಲ್ಲುಗುಂಡಿಯಲ್ಲಿ ಅಯ್ಯಪ್ಪ ಮಾಲಾಧಾರಿ ಪುಟಾಣಿ ಸ್ವಾಮಿಯ ಕೈ ಹಿಡಿದು ಹಣ್ಣಿನ ಅಂಗಡಿಗೆ ಕರೆದುಕೊಂಡು ಹೋದ ಮುಸ್ಲಿಂ ವ್ಯಕ್ತಿ ಇಬ್ರಾಹಿಂ ಮೈಲಿಕಲ್ಲು ಎಂಬವರು ಮಗುವಿಗೆ ಹಣ್ಣು ಹಂಪಲನ್ನು ನೀಡಿ ಪ್ರೀತಿಯಿಂದ ಉಪಚರಿಸಿದ್ದಾರೆ. ಮುಸ್ಲಿಂ ವ್ಯಕ್ತಿಯ ಸೌಹಾರ್ದ ಮತ್ತು ಅಯ್ಯಪ್ಪ ಮಾಲೆ ಧರಿಸಿದ್ದ ಮಗುವನ್ನು ಗೌರವಿಸಿದ್ದು ಸಾರ್ವಜನಿಕರ ಗಮನ ಸೆಳೆದಿದೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
- Advertisement -