Friday, April 26, 2024
spot_imgspot_img
spot_imgspot_img

ಪುತ್ತೂರು: ಅಂದು ಯುವ ಉದ್ಯಮಿಗೆ ಧಮ್ಕಿ ಹಾಕಿದ ನಿತೇಶ್ ಕೌಡಿಚ್ಚಾರ್ ನ ಮತ್ತೊಂದು ನೀಚ ಪ್ರಕರಣ; ಕುಡಿಮೀಸೆ ಯುವಕನ ಕಾಮದ ಪ್ರೀತಿ-ಧರ್ಮದೇಟು..!

- Advertisement -G L Acharya panikkar
- Advertisement -

ಪುತ್ತೂರು: ಸಿಕ್ಕ ಸಿಕ್ಕಲ್ಲಿ ಅಮಾಯಕ ಹೆಣ್ಣು ಮಕ್ಕಳ ನಂಬರ್ ಪಡೆದುಕೊಂಡು ಅವರನ್ನ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ ಕಾಮುಕನೊಬ್ಬನಿಗೆ ಸ್ಧಳೀಯರು ಹಾಗೂ ಹುಡುಗಿಯರ ಪೋಷಕರು ಹಿಗ್ಗಾಮಗ್ಗಾ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಪುತ್ತೂರಿನಲ್ಲಿ ಮಂಜುನಾಥ ಬೋರ್ವೆಲ್ಸ್ ಸಂಸ್ಥೆಯ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ನಿತೇಶ್ ರೈ ಎಂಬ ಕಾಮುಕ ತನ್ನ ಕೆಲಸದ ಸಂದರ್ಭಗಳಲ್ಲಿ ಹಲವು ಊರುಗಳಿಗೆ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಅಲ್ಲಿನ ಹೆಣ್ಣು ಮಕ್ಕಳ ನಂಬರ್ ಪಡೆದುಕೊಂಡು ಅವರೊಂದಿಗೆ ಸಲುಗೆ ಬೆಳೆಸಿಕೊಂಡು ಬಳಿಕ ಪಾಗಲ್ ಪ್ರೇಮಿಯಂತೆ ನಾಟಕವಾಡಿ ಅವರನ್ನ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಈತನ ಕಾಮ ಅನ್ನೋ ಬಲೆಗೆ ಬಿದ್ದು ಅದೆಷ್ಟೋ ಜನರ ಜೀವನ ನರಕವಾಗಿದೆ.

ಚಿರಯುವಕ, ಚಿಗುರುಮೀಸೆ ಹುಟ್ಟಿಕೊಳ್ಳೊ ವಯಸ್ಸಿನ ನಿತೇಶ್ ನೋಡೋದಕ್ಕೆ ಏನು ಅರಿಯದ ಮುಗ್ದನಂತೆ ಇದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಈತ ಸಣ್ಣ ವಯಸ್ಸಿನಲ್ಲಿಯೇ ಕಾಮದಾಹವನ್ನ ತುಂಬಿಕೊಂಡಿದ್ದು, ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ಮುಗ್ಧ ಹೆಣ್ಣು ಮಕ್ಕಳನ್ನ ಯಾಮಾರಿಸಿ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಾನೆ.

ಸಾಮಾಜಿಕ ಜಾಲತಾಣ ಕೆಲ ಪೋಲಿ ಹುಡುಗರ ಅಡ್ಡ. ಇಲ್ಲಿ ಬರೋ ಅಮಾಯಕ ಹೆಣ್ಣು ಮಕ್ಕಳ ಪ್ರೋಫಲ್‌ಗಳೆ ಇವರ ಭೇಟೆ, ಇಂತಹ ಖತರ್‌ನಾಕ್ ಕಾಮಿಗಳಲ್ಲಿ ನಿತೇಶ್ ಕೂಡ ಒಬ್ಬ. ಸಾಮಾಜಿಕ ಜಾಲತಾಣದ ಮೂಲಕ ಈ ಭೂಪ ಅದೆಷ್ಟೋ ಹೆಣ್ಣು ಮಕ್ಕಳನ್ನ ಬೆಂಬಿಡದೆ ಕಾಡಿದ್ದಾನೆ. ನಂಬರ್ ಪಡೆದ ಬಳಿಕ ಹೆಣ್ಣು ಮಕ್ಕಳೊಂದಿಗೆ ಸಲಿಗೆ ಬೆಳೆಸಿಕೊಳ್ಳುತ್ತಿದ್ದ. ಅಲ್ಲದೆ ತಾನೊಬ್ಬ ಸಾಚ ಅನ್ನೋವಂತೆ ಬಿಂಬಿಸಿ ಹಣವಂತ ಅನ್ನೋವಂತೆ ಫೋಸ್ ಕೊಡ್ತಾ ಇದ್ದ. ಅಲ್ಲದೆ ಕೆಲವು ಅಂಡರ್‌ವಲ್ಡ್ ಲಿಂಕ್ ಹೊಂದಿದ್ದೇವೆ ಎಂದು ತೋರಿಸಿಕೊಳ್ಳುವ ಶೋಕಿಲಾಲಾಗಳ ಜೊತೆ ನನಗೆ ನಂಟಿದೆ, ನಾವು ತುಂಬಾ ಕ್ಲೋಸ್ ಅನ್ನೋವಂತೆ ನಂಬಿಸಿ ಯುವತಿಯರನ್ನ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಯುವತಿಯರು ಈತನ ತಾಳಕ್ಕೆ ಕುಣಿಯದೇ ಇದ್ರೆ ಬೆದರಿಸಿದ ಗದರಿಸಿ ತನ್ನ ಕಾಮದಾಹ ತೀರಿಸಿಕೊಳ್ಳುತ್ತಿದ್ದ.

ಪುತ್ತೂರು ಗ್ರಾಮಾಂತರ ಮೂಲದ ಅಪ್ರಾಪ್ತ ಯುವತಿಯೊಬ್ಬಳನ್ನ ಪರಿಚಯ ಮಾಡಿಕೊಂಡು ಆಕೆಯ ಬಳಿ ಪ್ರೀತಿಸುತ್ತಿದ್ದೇನೆ ಎಂದು ಪ್ರೀತಿಯ ಕರೆಯೋಲೆ ಇಟ್ಟಿದ್ದ. ಆಕೆ ಈತನನ್ನ ನಂಬಿ ಶುದ್ದ ಮನಸ್ಸಿನಿಂದ ಪ್ರೀತಿಸಿದ್ದಳು. ಆದ್ರೆ ಈ ನೀಚ ಪ್ರೀತಿಯ ನಾಟಕವಾಡಿ ಲೈಂಗಿಕವಾಗಿ ತೊಡಗಿಸಿಕೊಂಡು, ಬಳಿಕ ನಿರಂತರವಾಗಿ ಆಕೆಯ ನಗ್ನಚಿತ್ರ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ಹಾಗೂ ಈತನ ಸ್ನೇಹಿತರಿಗೂ ಆಕೆಯ ನಂಬರ್ ನೀಡಿ ಅವರೊಂದಿಗೆ ಲೈಂಗಿಕ ಕ್ರೀಯೆ ನಡೆಸುವಂತೆ ಕಿರುಕುಳ ನೀಡುತ್ತಿದ್ದ. ಇದನ್ನು ತಿಳಿದ ಹುಡುಗಿಯ ಪೋಷಕರು ಹಾಗೂ ಸ್ಥಳೀಯರು ಸೇರಿ ಈತನನ್ನ ಹೆಡೆಮುರಿಕಟ್ಟಿ ಲಫಂಗ ನಿತೇಶ್ ರೈ ಗೆ ಧರ್ಮದೇಟು ನೀಡಿದ್ದಾರೆ.

ಈತ ಅದೆಷ್ಟೊ ಹೆಣ್ಣು ಮಕ್ಕಳನ್ನ ಹೇಗೆಯೇ ಬಳಸಿಕೊಂಡಿದ್ದಾನೆ. ಊರು ಊರು ಸುತ್ತಿ ಅದೆಷ್ಟೋ ಮನೆ ಮನ ಹಾಳು ಮಾಡೋ ನಾಲಾಯಕ್ ನೀತೇಶ ಆಗಿದ್ದಾನೆ. ಸಿಕ್ಕಿ ಬಿದ್ದ ಪ್ರಕರಣ ಇದು ಒಂದಾದ್ರೆ ತೆರೆಮರೆಯಲ್ಲಿ ಉಳಿದ ಪ್ರಕರಣಗಳು ನೂರಾರಿದೆ. ಸಮಾಜದ ಹೆಣ್ಣು ಮಕ್ಕಳ ಮೇಲೆ ಕಾಮದ ಕಣ್ಣು ಚಾಚಿ ಮಾಡಬಾರದ ಪೋಲಿ ಆಟ ಆಡಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಕನೆಕ್ಟ್, ಲವ್, ಮದುವೆ ಮಾತು, ಕಾಮ ಈ ಅಬ್ಬೆಪಾರಿಯ ಜೀವನವೇ ಇಷ್ಟೆ.. ಹೆಣ್ಣಿನ ಜೀವನದ ಜೊತೆ ಆಟವಾಡಿ ನಾನೇನು ಮಾಡಿಲ್ಲ ಎಂದು ಆರಾಮಾವಾಗಿ ತಿರುಗಾಡ್ತಾ. ಶೋಕಿ ಲೈಪ್ ಲೀಡ್ ಮಾಡ್ತಾ ಇದ್ದ ನರ ರಾಕ್ಷಸನ ಕಾಮುತೃಷೆಯನ್ನು ಖಾಕಿ ಪಡೆ ಬಿಡಿಸಬೇಕಾಗಿದೆ.

ಸ್ನೇಹ, ಲವ್, ಮದುವೆ, ಕಾಮ ಎಂದವನಿಗೆ ಜೈಲೂಟದ ರುಚಿಯೂ ನೋಡಬೇಕು ಅನ್ನೋ ಮಾತು ಸಾರ್ವಜನಿಕ ವಯಲದಲ್ಲಿ ಕೇಳಿ ಬರ‍್ತಾ ಇದೆ. ನೀಚ ನಿತೇಶ್‌ಗೆ ಆಡಿದ ಆಟಕ್ಕೆ ತಕ್ಕ ಶಿಕ್ಷೆಯಾಗಲೇ ಬೇಕು… ಇಂತಹ ಕಾಮ ಕ್ರಿಮಿಗಳಿಗೆ ಪೊಲೀಸರೇ ಉತ್ತರ ನೀಡಬೇಕಾಗಿದೆ.

- Advertisement -

Related news

error: Content is protected !!