ಪುತ್ತೂರು: ಅವಳಿ ವೀರ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಜನ್ಮಭೂಮಿ ಪಡುಮಲೆಯಲ್ಲಿ ಕೋಟಿ ಚೆನ್ನಯರು ಆರಾಧಿಸುತ್ತ ಬಂದಿರುವ ಎರುಕೊಟ್ಯ ನಾಗ ಬಿರ್ಮೆರ ಕೇತ್ರದಲ್ಲಿ ಜ. 14ರಂದು ಬೆಳಗ್ಗೆ 9ರಿಂದ ಗಣಪತಿ ಹೋಮ ನಡೆಯಿತು.
ಕೋಟಿ ಚೆನ್ನಯ ಸಂಚಲನ ಸಮಿತಿ ಸೇವಾ ಟ್ರಸ್ಟ್ ಇದರ ಕಛೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಬಳಿಕ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಬೆಳ್ತಂಗಡಿ, ಕೋಟಿ ಚೆನ್ನಯ ಸಂಚಲನ ಸಮಿತಿ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷರಾದ ವಿಟ್ಲದ ಮಾಜಿ ಶಾಸಕ ರುಕ್ಮಯ ಪೂಜಾರಿ, ಸಮಿತಿ ಅಧ್ಯಕ್ಷರಾದ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ.
ಆಡಳಿತ ಮೊಕ್ತೇಸರರಾದ ಬಹುಭಾಷಾ ಚಲನಚಿತ್ರ ನಟ ವಿನೋದ್ ಅಳ್ವ ಮೂಡಾಯೂರುಗುತ್ತು, ದಾಸ್ತಾವೇಜು ಬರಹಗಾರ ಶೇಖರ್ ನಾರವಿ, ಪ್ರಮುಖರಾಧ ಕೆ ಪಿ ದಿವಾಕರ್, ವಿಜಯ ಕುಮಾರ್ ಸೊರಕೆ, ವೇದನಾಥ ಸುವರ್ಣ, ಸಾಜ ರಾಧಾಕೃಷ್ಣ ಆಳ್ವ, ಮಹಮ್ಮದ್ ಬಡಗನ್ನೂರು, ಆರ್ ಸಿ ನಾರಾಯಣ ರೆಂಜ, ನೀತೀಶ್ ಕುಮಾರ್ ಶಾಂತಿವನ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.