Tuesday, April 30, 2024
spot_imgspot_img
spot_imgspot_img

ಪುತ್ತೂರು: ಚರಣ್ ರಾಜ್ ಹತ್ಯೆ ಪ್ರಕರಣ; ಎಸ್‌ಐ ಉದಯ ರವಿ ನೇತೃತ್ವದ ತಂಡದ ಮಿಂಚಿನ ಕಾರ್ಯಚರಣೆ – ಮೂವರು ಅರೆಸ್ಟ್‌

- Advertisement -G L Acharya panikkar
- Advertisement -

ಪುತ್ತೂರು: ಚರಣ್ ರಾಜ್ ಹತ್ಯೆ ನಿನ್ನೆ ನಡೆದಿದ್ದು ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುವುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಈ ಕೃತ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ಈ ಹಿಂದೆ ನಡೆದ ಕಾರ್ತಿಕ್ ಮೇರ್ಲ ಹತ್ಯೆಗೆ ಪ್ರತೀಕಾರವಾಗಿ ಚರಣ್ ರಾಜ್ ಎಂಬಾತನನ್ನು ಕಲ್ಲಡ್ಕದ ಕಿಶೋರ್‍ ಪೂಜಾರಿ ತಂಡವು ಹತ್ಯೆ ಮಾಡಿತ್ತು.

ಚರಣ್ ರಾಜ್

ದಕ್ಷಿಣ ಕನ್ನಡ ಎಸ್‌.ಪಿ ಋಷಿಕೇಷ್‌ ಸೋನಾವಣೆ ಘಟನಾ ಸ್ಥಳಕ್ಕೆ ಖುದ್ಧಾಗಿ ಆಗಮಿಸಿ ಮಾಹಿತಿ ಕಲೆಹಾಕಿದ್ದರು. ಪೊಲೀಸರ ವಿಶೇಷ ತಂಡ ರಚಿಸಿ ಕ್ಷಿಪ್ರಗತಿಯನ್ನು ಕಾರ್ಯಚರಣೆಗೆ ಫೀಲ್ಡ್‌ಗೆ ಇಳಿಸಲಾಗಿತ್ತು. ಈಗ ಸಂಪ್ಯ ಪೊಲೀಸ್‌ ಸಬ್ ಇನ್ಸ್ ಪೆಕ್ಟರ್ ಉದಯ ರವಿ ನೇತೃತ್ವದ ತಂಡ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಯ್ಯೂರು ನಿವಾಸಿ ನರ್ಮೇಶ್ ಹಾಗೂ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದೆ. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗುತ್ತಿದೆ. ಪ್ರಮುಖ ಆರೋಪಿ ಕಿಶೋರ್‍ ಪೂಜಾರಿ ಎಂಬಾತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

ಪುತ್ತೂರು: ಚರಣ್ ರಾಜ್ ಕೊಲೆ ಪ್ರಕರಣ – ಕಿಶೋರ್ ಪೂಜಾರಿ ತಂಡದಿಂದ ಕೃತ್ಯ !

ಪುತ್ತೂರು: ಚೌತಿಯ ರಾತ್ರಿಯಂದು ನೆತ್ತರು ಹರಿಸಿದವ ಹಾಡಹಗಲೇ ಕೊಲೆಯಾದ..!

- Advertisement -

Related news

error: Content is protected !!