- Advertisement -
- Advertisement -
ಪುತ್ತೂರು: ಕೆಮ್ಮಾಯಿಯಲ್ಲಿ ಸ್ಕೂಟರ್ ಸವಾರ ಪೊಲೀಸ್ ಬ್ಯಾರಿಕೇಡ್ ಗೆ ಗುದ್ದಿ ಅಪಘಾತವಾಗಿದ್ದು, ಸವಾರನಿಗೆ ತೀವ್ರ ರೀತಿಯ ಗಾಯವಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ.
ಗಾಯಗೊಂಡವರನ್ನು ರಂಜಿತ್ ಎಂದು ಗುರುತಿಸಲಾಗಿದೆ. ಇವರನ್ನು ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಪೊಲೀಸರೆ ನೇರ ಹೊಣೆ ಆಗಿರುತ್ತಾರೆ. ಕಾರಣ ರಾತ್ರಿ ನಡು ರಸ್ತೆಯಲ್ಲಿ ಎರಡೆರಡು ಬ್ಯಾರಿಕೇಡ್ ಗಳನ್ನು ಹಾಕುತ್ತಾರೆ ಆದರೆ ಅಲ್ಲಿ ಪೊಲೀಸರಿರುವುದಿಲ್ಲ. ಇದರಿಂದ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.
- Advertisement -