- Advertisement -
- Advertisement -


ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಳದ ಎದುರು ಗದ್ದೆಯ ಕೆರೆಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿ ಮನೋಹರ ಪ್ರಭು ಎಂದು ಗುರುತಿಸಲಾಗಿದೆ.



ಇಂದು ಬೆಳಗ್ಗೆ ಮನೋಹರ ಪ್ರಭು ಅವರ ಸ್ಕೂಟರ್ ಹಾಗೂ ಚಪ್ಪಲಿ ಬಾವಿ ಬಳಿ ಪತ್ತೆಯಾದ ಹಿನ್ನೆಲೆ ವ್ಯಕ್ತಿ ಕೆರೆಯಲ್ಲಿ ಬಿದ್ದು ಕಣ್ಮರೆಯಾಗಿದ್ದಾರೆಂದು ಶಂಕೆ ವ್ಯಕ್ತವಾಗಿದ್ದು, ಮನೋಹರ ಪ್ರಭು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅಲ್ಲೇ ಪಕ್ಕದಲ್ಲಿದ್ದ ದೇವರ ಗದ್ದೆಯ ಬಾವಿಯಲ್ಲಿ ಶವ ಪತ್ತೆಯಾಗಿದೆ.

ಸದ್ಯ ಅಗ್ನಿಶಾಮಕ ದಳ ತಂಡ ಬಾವಿಯಿಂದ ಶವ ಮೇಲಕ್ಕೆತ್ತಿದ್ದು, ಪ್ರಕರಣ ದಾಖಲಾಗಿದೆ. ಘಟನೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.



- Advertisement -