Tuesday, August 4, 2026
spot_imgspot_img
spot_imgspot_img

ಪುತ್ತೂರು: ಮಾಸ್ ಲಿಮಿಟೆಡ್‌ ಸಂಸ್ಥೆಯ ನಿರ್ದೇಶಕರಾಗಿ ಸವಣೂರು ಸೀತಾರಾಮ ರೈ, ಪಿ. ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಸುಧಾ ಎಸ್ ರೈ ಅವಿರೋಧ ಆಯ್ಕೆ

- Advertisement -
- Advertisement -

ಪುತ್ತೂರು: ಅವಿಭಜಿತ ದ.ಕ. ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಮಾಸ್ ಲಿಮಿಟೆಡ್‌ನ ಆಡಳಿತ ಮಂಡಳಿಗೆ ಚುನಾವಣೆ ಘೋಷಣೆಯಾಗಿದ್ದು , ನಾಮ ಪತ್ರ ಸಲ್ಲಿಕೆ ಅವಧಿ ಮುಗಿದಿದೆ. ನಾಮಪತ್ರಗಳ ಪರಿಶೀಲನೆ ನ. 6 ರಂದು ನಡೆದಿದ್ದು , ಪುತ್ತೂರು, ಸುಳ್ಯ , ಬೆಳ್ತಂಗಡಿ ತಾಲೂಕುಗಳ ಅಭ್ಯ ರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪುತ್ತೂರು ತಾಲೂಕಿನಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ, ಹಿರಿಯ ಸಹಕಾರಿ, ಪುತ್ತೂರು ಆದರ್ಶ ವಿವಿಧ್ದೋದೇಶ ಸಹಕಾರ ಸಂಘದ ಅಧ್ಯಕ್ಷ ಸವಣೂರು, ಕೆ.ಸೀತಾರಾಮ ರೈ, ದ.ಕ, ಜಿಲ್ಲಾ ಜೇನು ವ್ಯವಸಾಯಗಾರ ಸಹಕಾರ ಸಂಘದ ಉಪಾಧ್ಯಕ್ಷ, ಕೋಲ್ಪೆ ಷಣ್ಮು ಖ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪಿ. ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು ಹಾಗೂ ಸವಣೂರು ಬೆನಸ ರಬ್ಬರ್ ಸೊಸೈಟಿಯ ನಿರ್ದೇಶಕಿ ಹಾಗೂ ಸವಣೂರು ಗ್ರಾ.ಪಂ, ಮಾಜಿ ಅಧ್ಯಕ್ಷೆ ಸುಧಾ ಎಸ್ ರೈ ಪುಣ್ಚಪ್ಪಾಡಿರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಸ್ ಸಂಸ್ಥೆಯ ನೂತನ ಅಧ್ಯಕ್ಷರ ಆಯ್ಕೆ ನ. 21 ರಂದು ನಡೆಯಲಿದೆ ಎಂದು ತಿಳಿದು ಬಂದಿದೆ

- Advertisement -

Related news

error: Content is protected !!